
ವಿಜಯಪುರ: ‘ಗಾಂಧೀಜಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಪ್ರಾಚಾರ್ಯ ಆರ್.ಎಸ್. ಕಲ್ಲೂರಮಠ ಹೇಳಿದರು.

j3tvkannada
1924ರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ವಿಚಾರಧಾರೆಗಳು ಯುವಜನತೆಗೆ ತುಂಬಾ ಅವಶ್ಯ. ಸತ್ಯ, ಅಹಿಂಸೆ ತತ್ವಗಳೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ ಎಂದರು.
ಮಹಾತ್ಮ ಗಾಂಧಿ ಅವರ ಜೀವನವೇ ಒಂದು ದೊಡ್ಡ ಸಂದೇಶ. ಸತ್ಯ, ಅಹಿಂಸೆಯ ಬಲದಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಅವರ ಸಮಗ್ರ ಜೀವನವನ್ನು ಎಲ್ಲರೂ ಅಧ್ಯಯನ ಮಾಡಬೇಕು. ಸ್ವಾತಂತ್ರ್ಯ ಹೋರಾಟ, ಸಮಾನತೆ, ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ಗಾಂಧಿ ನೀಡಿದ ಅನೇಕ ಕೊಡುಗೆಗಳು ಸ್ಫೂರ್ತಿದಾಯಕವಾಗಿವೆ’ ಎಂದು ತಿಳಿಸಿದರು. ಗ್ರಾಮ ಸ್ವರಾಜ್ ಮತ್ತು ಗಾಂಧೀಜಿ ಆರ್ಥಿಕ ಚಿಂತನೆಗಳ ವಿಷಯ ಕುರಿತು ಪ್ರಾಧ್ಯಾಪಕ ಚಿದಾನಂದ ಆನೂರ, ‘ಅಸ್ಪೃಶ್ಯತೆ ನಿವಾರಣೆ ಬಗ್ಗೆ ಗಾಂಧೀಜಿ ಚಿಂತನೆಗಳ’ ವಿಷಯ ಕುರಿತು ಅನಂತ ಪದ್ಮನಾಭ ಅವರು ಉಪನ್ಯಾಸ ನೀಡಿದರು.
ರಾಜಶೇಖರ ಬೆನಕನಹಳ್ಳಿ, ಲಕ್ಷ್ಮೀ ಮೋರೆ, ಎಂ.ಆರ್. ಕೆಂಭಾವಿ, ದಾವಲಸಾ ಪಿಂಜಾರ, ರಮೇಶ ಬಳ್ಕೊಳ್ಳಿ, ಎಂ.ಆರ್. ಜೋಶಿ, ಅರ್ಪಿತಾ ಪಾಟೀಲ, ಭಾರತಿ, ಆಸೀಫ್ ರೋಜಿನದಾರ, ಮಂಜುನಾಥ ಗಾಣಿಗೇರ, ರಾಮಣ್ಣ ಕಳ್ಳಿ, ಸುಜಾತಾ ಬಿರಾದಾರ, ಪೂಜಾ ಪೂಜಾರಿ, ಸುಮಂಗಲಾ, ಎಚ್.ಎಂ. ಉಕ್ಕಲಿ ಉಪಸ್ಥಿತರಿದ್ದರು.