
ಯಾದಗಿರಿ: ಶುಕ್ರವಾರದಂದು ಯೇಸುಕ್ರಿಸ್ತನ ಮರಣದ ಪ್ರಯುಕ್ತವಾಗಿ ಗುಡ್ ಫ್ರೈಡೇಯನ್ನು ಶ್ರದ್ದೆ, ಭಕ್ತಿಯಿಂದ ಆಚರಿಸಲಾಗಿದೆ. ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಗಳು ಜರುಗಿದವು.

j3tvkannada
ಶುಕ್ರವಾರ ಬೆಳಿಗ್ಗೆ 11ರಿಂದ ವಿವಿಧ ಚರ್ಚ್ ಗಳಲ್ಲಿ ಪ್ರಾರ್ಥನಾ ಕೂಟಗಳು, ಕ್ರಿಸ್ತನ ಸಂದೇಶ ತಿಳಿಸುವುದು ಸೇರಿದಂತೆ ಗುಡ್ ಫ್ರೈಡೇಯ ಆಚರಣೆಗಳು ಜರುಗಿದವು. 40 ದಿನಗಳಿಂದ ಉಪವಾಸ ವ್ರತದಲ್ಲಿದ್ದವರಿಗೆ ಕೆಲವೆಡೆ ಹಣ್ಣು, ಮಜ್ಜಿಗೆ, ನಿಂಬೆರಸ, ಉಪಹಾರ ವಿತರಣೆ ಮಾಡಲಾಯಿತು.ಕೇಂದ್ರ ಮೆಥೋಡಿಸ್ಟ್ ಚರ್ಚ್ನಲ್ಲಿ ನಡೆದ ವಿಶೇಷ ಪ್ರಾರ್ಥನಾಕೂಟದಲ್ಲಿ ಸಭಾಪಾಲಕ ಜಾನ್ ವೆಸ್ಲಿ ಶುಭ ಶುಕ್ರವಾರದ ಸಂದೇಶ ನೀಡಿದರು.
ನಗರದ ಹೊಸಳ್ಳಿ ಕ್ರಾಸ್ ಹತ್ತಿರದ ತಾತಾ ಸೀಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ನಲ್ಲಿ ವಿಶೇಷ ಪ್ರಾರ್ಥನಾ ಸಭೆ ಜರುಗಿತು. ರೆವರೆಂಡ್ ಅರುಣಕುಮಾರ ಮಾತನಾಡಿದರು.
ಅಂಬೇಡ್ಕರ್ ನಗರದ ಚರ್ಚ್: ಅಂಬೇಡ್ಕರ್ ನಗರ ಬಡಾವಣೆಯಲ್ಲಿನ ಮೆಥೋಡಿಸ್ಟ್ ಚರ್ಚ್ನಲ್ಲಿ ಉಪವಾಸ ಪ್ರಾರ್ಥನೆ ಸಲ್ಲಿಸಲಾಯಿತು. ಫಾದರ್ ಆರ್.ಆನಂದ ಆಶನಾಳ, ದೇವಪುತ್ರ ಮಾಳಿಕೇರಿ, ವಿಜಯಕುಮಾರ ಮಾಳಿಕೇರಿ, ಸಾಲೋಮನ್ ಹಾಲಗೇರಾ, ಮೋಹನ ಹಳ್ಳಿ, ಯಾಕೋಬ ಸಿದ್ದಿ. ಚಂದ್ರಮೋಹನ ಮ್ಯಾಗೇರಿ, ರಾಜಪ್ಪ ಮ್ಯಾಗೇರಿ, ಭಾಸ್ಕರ ಮ್ಯಾಗೇರಿ, ಆನಂದ ಮ್ಯಾಗೇರಿ, ಶಶಿ ದಾಸನ, ರಾಹುಲ್ ಮುಂಡ್ರಿಕೇರಿ, ಸಚಿನ್ ಮಾಳಿಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.