

j3tvkannada
ಕೋಲಾರ : ಬಿಜೆಪಿ ಕಾಲದಲ್ಲಿ ಒಂದೇ ಒಂದು ಮನೆ ಕೊಟ್ಟಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗ್ತೇನೆ ಎಂದು ಸಚಿವ ಜಮೀರ್ ಅಹಮದ್ ಸವಾಲ್ ಹಾಕಿದರು. ಪ್ರಧಾನ್ ಮಂತ್ರಿ ಆವಾಜ್ ಯೋಜನೆಯಡಿ 1.5 ಲಕ್ಷ ಹಣ ಕೊಡ್ತಾರೆ, ಬಡವರ ಮನೆಯಲ್ಲು 18 ಪರ್ಸೆಂಟ್ ಜಿ.ಎಸ್.ಟಿ ತಗೊಳ್ತಾರೆ ಎಂದು ಹೇಳಿದರು. ಕೋಲಾರದಲ್ಲಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಯ ಮಧ್ಯೆ ಅನುದಾನ ಕೇಳಲು ನಾನು ಯೋಚಿಸಿದ್ದೆ, ಹಿಂದಿನ ಸಮ್ಮಿಶ್ರ ಸರ್ಕಾರ ಬಿ.ಜೆ.ಪಿ ಸರ್ಕಾರದಲ್ಲೂ ಒಂದೇ ಒಂದು ಮನೆ ನಿರ್ಮಾಣ ಆಗಿಲ್ಲ.
2026 ರಲ್ಲಿ ರಾಜ್ಯಾದ್ಯಂತ ಮನೆಗಳ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ ಮುಂದಿನ ತಿಂಗಳು 42 ಸಾವಿರ ಮನೆಗಳ ಹಸ್ತಾಂತರ ಕಾರ್ಯ ಮಾಡಲಿದ್ದೇವೆ ಎಂದು ಹೇಳಿದರು. ಬಿ.ಜೆ.ಪಿ ಕಾಲದಲ್ಲಿ ಒಂದೇ ಒಂದು ಮನೆ ಕೊಟ್ಟಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗ್ತೇನೆ ಬಡವರ ಬಗ್ಗೆಯ ಕಾಳಜಿ, ಅದು ಕಾಂಗ್ರೆಸ್ ಪಕ್ಷದ ಸಾಧನೆ, ಬಿ.ಜೆ.ಪಿಯ ಸಾಧನೆ ಸೊನ್ನೆ ಅಷ್ಟೆ ಹೇಳಿಕೊಳ್ಳೋಕೆ ಬೇರೇನು ಇಲ್ಲ ಎಂದು ಸಚಿವ ಜಮೀರ್ ಅಹಮದ್ ಹೇಳಿದರು.