

j3tvkannada
ತುಮಕೂರು : ರವಿವಾರದಂದು ರಾಘವೇಂದ್ರ ರಾಜ್ಕುಮಾರ್ ಅವರ ಮಗ ಯುವ ರಾಜ್ಕುಮಾರ್ ನಟಿಸಿರುವ ಎಕ್ಕ ಚಿತ್ರದ ತಂಡವು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಾಪಸ್ಸು ಹೋಗುವಾಗ ಬೌನ್ಸರ್ಗಳಿದ್ದ ಕಾರು ತನಗೆ ಗುದ್ದಿದ ಕಾರಣ ಕಾಲಿಗೆ ತೀವ್ರವಾದ ಪೆಟ್ಟಾಗಿದೆ ಎಂದು ಈ ಮಹಿಳೆ ಹೇಳುತ್ತಾರೆ. ಅಂದ ಹಾಗೆ ಮಹಿಳೆಯ ಹೆಸರು ನಿಂಗಮ್ಮ ಮತ್ತು ಅವರು ಬಳ್ಳಾರಿ ಜಿಲ್ಲೆಯವರು.
ಮಠದ ಶಾಲೆಯಲ್ಲಿ ಮಗನನ್ನು ದಾಖಲಿಸಲು ಬಂದಾಗ ಅಪಘಾತ ನಡೆದಿದೆ. ಮಠಕ್ಕೆ ಸಿನಿಮಾದವರು ಬಂದಿದ್ದಾರೆ ಅಂತ ಕಿವಿಗೆ ಬಿದ್ದ ಕೂಡಲೇ ನಿಂಗಮ್ಮನಲ್ಲಿ ಸಹಜವಾಗೇ ಕುತೂಹಲ ಹುಟ್ಟಿದೆ. ಆದರೆ ಚಿತ್ರತಂಡ ವಾಪಸ್ಸು ಹೋಗುವಾಗ ಒಂದು ಕಾರು ತನಗೆ ಗುದ್ದಿದೆ ಎಂದು ನಿಂಗಮ್ಮ ಹೇಳುತ್ತಾರೆ.