
ಯಾದಗಿರಿ: ಬಟ್ಟೆ ತೊಳೆಯುವಾಗ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಯಾದಗಿರಿಯ ಮೊಟ್ನಳ್ಳಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.

j3tvkannada
ಮೃತರನ್ನು ವೈಶಾಲಿ (17) ಮತ್ತು ನವೀತಾ (16) ಎಂದು ಗುರುತಿಸಲಾಗಿದೆ. ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು. ಈ ಇಬ್ಬರೂ ಬಟ್ಟೆ ತೊಳೆಯಲು ಬಾವಿ ಬಳಿ ಹೋಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳೀಯರು ಮೃತದೇಹಗಳನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ.
ಮಳೆಯು ನಿರಂತರವಾಗಿ ಬರುತಿದ್ದು ಕೆರೆ ಬಾವಿಗಳ ದಡದಲ್ಲಿ ಪಾಚಿ ಬೆಳೆದಿವೆ. ಅದರಿಂದ ಜನರು ಮುಂಜಾಗ್ರತೆಯಿಂದ ಮಕ್ಕಳನ್ನು ಕೆರೆ, ಬಾವಿ ಹಾಗೂ ಕಟ್ಟೆಗಳಿಗೆ ಹೋಗದಂತೆ ನೊಡಿಕೊಳ್ಳಬೇಕಾದದ್ದು ಪೋಷಕರ ಕರ್ತವ್ಯವಾಗಿದೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.