
ಹಾವೇರಿ: ಪ್ರಭಾವಿ ವ್ಯಕ್ತಿಯೊಬ್ಬರು ತಂಗಿದ್ದ ಸ್ಥಳದ ಬಗ್ಗೆ ಲೊಕೇಶನ್ ಸಮೇತ ಮಾಹಿತಿಯನ್ನು ಅನ್ಯರಿಗೆ ನೀಡಿದ ಆರೋಪದಡಿ ಹಾನಗಲ್ ಸರ್ಕಲ್ ಇನ್ಸ್ಪೆಕ್ಟರ್ ಆಂಜನೇಯ ಎನ್ ಎಚ್ ಆಂಜನೇಯ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇವರು ನೀಡಿದ ಲೊಕೇಶನ್ನಿಂದಾಗಿ ಸಮಸ್ಯೆಯೊಳಗೆ ಸಿಲುಕಿದ್ದ, ಹಾನಗಲ್ ಪಟ್ಟಣದ ಪ್ರಭಾವಿ ಒಬ್ಬರು ಈ ವಿಚಾರದ ಮಾಹಿತಿಯನ್ನು ನೀಡಿದ್ದರು. ಇದನ್ನು ಆಧರಿಸಿ ಪ್ರಾಥಮಿಕ ತನಿಖೆ ನಡೆಸಿ ವರದಿಯನ್ನು ಪಡೆದಿದ್ದ ದಾವಣಗೆರೆ ವಲಯದ ಐ ಜಿ ಪಿ ರವಿಕಾಂತೇಗೌಡ ಅವರು, ಸಿ ಪಿ ಐ ಆಂಜನೇಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಐ ಜಿ ಪಿ ಆದೇಶ ಉಲ್ಲೇಖಿಸಿ ಮತ್ತೊಂದು ಆದೇಶವನ್ನು ಹೊರಡಿಸಿರುವ ಜಿಲ್ಲಾ ಎಸ್ ಪಿ ಆಂಶು ಕುಮಾರ ಸಿ ಪಿ ಐ ಆಂಜನೇಯ ಅವರನ್ನು ಜೂನ್ 15 ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರಿಂದ ತರವಾದ ಸ್ಥಾನಕ್ಕೆ ಪ್ರಭಾರಿಯಾಗಿ ಶಿಗ್ಗಾವಿ ಸಿ ಪಿ ಐ ಅನಿಲ್ ಕುಮಾರ್ ರಾಥೋಡ್ ಅವರನ್ನು ನಿಯೋಜಿಸಲಾಗಿದೆ. ಎಂದು ತಿಳಿಸಿದ್ದಾರೆ.
ವಿರೋಧೀ ಗುಂಪಿಗೆ ಮಾಹಿತಿಯನ್ನು ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ, ಅನುಮಾನಾಸ್ಪದ ವ್ಯಕ್ತಿಗಳ ಲೊಕೇಶನ್ ತಿಳಿದುಕೊಳ್ಳುವ ಅವಕಾಶ ಪೊಲೀಸರಿಗಿದೆ. ಆದರೆ, ಸಿ ಪಿ ಐ ಆಂಜನೇಯ ಅವರು ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.