
ಚಾಮರಾಜನಗರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಹೊತ್ತ ಭಕ್ತರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು, ತೊಪ್ಪನಹಳ್ಳಿ ಗ್ರಾಮದ ಭಕ್ತರಾದ ನಂದೀಶ್ರವರು ಮುಡಿ ಕೌಂಟರ್ ಹಿಂಭಾಗ ಇರುವ ಪರ ಮಾಡುವ ಸ್ಥಳದಲ್ಲಿ ಅನ್ನ ಸಂತರ್ಪಣೆ ಮಾಡಿದರು.

j3tvkannada
ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಎಣ್ಣೆ ಮಜ್ಜನ ಸೇವಾಕರ್ತರಾದ ಶೆಟ್ಟಿ ಸರಗೂರು ಮೂಗಪ್ಪ ಹಾಗೂ ರಾಮವ್ವ ಮಠದ ಶ್ರೀ ಸಿದ್ದಪ್ಪ ಸ್ವಾಮಿಯವರು ಸಾನಿಧ್ಯವನ್ನು ವಹಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನ ಪ್ರಸಾದಕ್ಕೆ ವಿಶೇಷ ಪೂಜೆ ನೆರವೇರಿಸಿ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ಇಂದು ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಅಪಾರ ಭಕ್ತವೃಂದ ಪಾಲ್ಗೊಂಡು ಸೇವೆ ಮಾಡುತ್ತಿರುವುದು ಅಪಾರ ಸಂತಸ ತಂದಿದೆ. ಹೀಗೆ ನಿಮ್ಮ ಸೇವೆ ಮುಂದುವರೆಯಲಿ ಅದರಂತೆ ಇಂದು ನಾವು ಮಲೆ ಮಾದಪ್ಪನ ಸನ್ನಿಧಿಗೆ ಆಗಮಿಸುವಂತಹ ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣವನ್ನು ಏರ್ಪಡಿಸಿರುವುದು ಪುಣ್ಯದ ಕೆಲಸವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಪ್ರಾಧಿಕಾರದ ಅಧಿಕಾರಿಗಳು ನಿಜ ಸಂಗತಿಯನ್ನು ಭಕ್ತರಿಗೆ ಪರಿಚಯಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ ಸರಿಸಮಾನವಾಗಿ ಶಿರಬಾಗಿ ನಮಿಸಿ ಸ್ವೀಕರಿಸುವುದು ಅನ್ನ ಮಾತ್ರವೇ, ಅನ್ನ ದೇವರ ಮುಂದೆ ಇನ್ನೊಂದು ದೇವರುಂಟೆ, ಅನ್ನ ಪರಬ್ರಹ್ಮ ಸ್ವರೂಪ. ಅನ್ನಪೂರ್ಣಯಾ ನಮಃ ಎಂಬ ವಾಕ್ಯದೊಡನೆ ಎಲ್ಲಾ ಜನಾಂಗದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ನಮಿಸಿ ಸ್ವೀಕರಿಸುವ ಮಹಾಪ್ರಸಾದವಾಗಿದೆ. ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ಅನ್ನ ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ತೊಪ್ಪನಹಳ್ಳಿಯ ಕಾಳಪ್ಪ, ನಂದೀಶ್, ಶೆಟ್ಟಿ ಸರಗೂರಿನ ಗ್ರಾಮದ ಯಜಮಾನರಾದ ರಾಮಸ್ವಾಮಿ, ಹೋಟೆಲ್ ನಾಗಣ್ಣ, ಪುಟ್ಟಮಾದಯ್ಯ, ಹರೀಶ್, ಇತರರು ಹಾಗೂ ಭಕ್ತವೃಂದದವರು ಹಾಜರಿದ್ದರು.