
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಘಟಿಸುವುದು ಸರ್ವೇ ಸಾಮಾನ್ಯವಗಿದೆ. ಇಲ್ಲೊಬ್ಬ ಕಾರು ಚಾಲಕ ರಾತ್ರಿ ಹೊತ್ತಿನಲ್ಲಿ ಬೇರೊಂದು ಕಾರಿಗೆ ಮುಖಾ ಮುಖಿ ಡಿಕ್ಕಿ ಹೊಡೆದಿದ್ದಾರೆ. ತಾನು ಮಾಡಿದ ತಪ್ಪಿಗೆ ಬರೋಬ್ಬರಿ 3.8 ಲಕ್ಷ ಮೊತ್ತ ಪಾವತಿಸಿದ್ದಾನೆ. ಇಂಥದ್ದೊಂದು ಘಟನೆ ಬೆಂಗಳೂರಿನ ಕಮ್ಮನಹಳ್ಳಿ ಜಂಕ್ಷನ್ನಲ್ಲಿ ಇತ್ತೀಚೆಗೆ ತಡರಾತ್ರಿ ನಡೆದಿದೆ.
ಬೆಂಗಳೂರು ಸಂಚಾರಿ ಪೊಲೀಸರು ನಿತ್ಯವು ವಾಹನ ದಟ್ಟಣೆ ನಿವಾರಿಸಲು ಹರಸಾಹಸ ಪಡುತ್ತಾರೆ. ಈ ಮಧ್ಯೆ ಸಂಚಾರ ನಿಯಮ ಉಲ್ಲಂಘಿಸುವವರು, ರಸ್ತೆ ಅಪಘಾತ ಮಾಡುವವರಿಂದ ಮತ್ತೊಂದು ರೀತಿಯಲ್ಲಿ ಕಿರಿಕಿರಿ ಅನುಭವಿಸುವರು. ಸದ್ಯ ತಡರಾತ್ರಿಯಲ್ಲಿ ಎರಡು ಕಾರುಗಳ ಮಧ್ಯೆ ಮುಖಾ ಮುಖಿ ಡಿಕ್ಕಿ ಹೊಡೆದ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಓರ್ವ ಕಾರು ಮಾಲೀಕನ ಅಜಾಗರೂಕತೆ ಗೊತ್ತಾಗಿದೆ. ಅಪಘಾತ ದೃಶ್ಯಗಳು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಮ್ಮನಹಳ್ಳಿ ಜಂಕ್ಷನ್ನಲ್ಲಿ ರಾತ್ರಿ ಎಲ್ಲಾ ವಾಹನಗಳು ಸರಾಗವಾಗಿ ಹೋಗುತ್ತಿದ್ದವು. ವಿಡಿಯೋ ಸೆರೆ ಹಿಡಿದ ಕ್ಯಾಮೆರಾ ಹೊಂದಿರುವ ಕಾರು ಸಹ ಎಡಬದಿಯಲ್ಲಿ ಚಲಿಸುತ್ತಿತ್ತು. ನೋಡು ನೋಡುತ್ತಲೇ ಫೋಕಸ್ ಲೈಟ್ ಎದುರಾಯಿತು. ದಿಢೀರನೇ ಈ ಕಾರಿಗೆ ಎದುರಿನಿಂದ ಬಂದು ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಕುಡಿದು ವಾಹನ ಚಲಾಯಿಸಿದ ಚಾಲಕನು ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸದೇ ಪಾನಮತ್ತ ಚಾಲಕನಿಂದ ಕಾರಿನ ಖರ್ಚು ರಿಪೇರಿಗೆ ಹಣ ಕೊಡಿಸಿದರು. ಎದುರಿನ ಕಾರಿಗೆ ಗುದ್ದಿದ್ದಕ್ಕೆ ಮುಂದಿನ ಬಾನೆಟ್, ಇಂಜಿನ್ ಕಡೆಗಳಲ್ಲಿ ಆದ ನುಜ್ಜು ಗುಜ್ಜು ಸರಿ ಮಾಡಿಸಿ, ರಿಪೇರಿ ಖರ್ಚು ಕೊಡಿಸಲಾಗಿದೆ. ಜೊತೆಗೆ ಪಾನಮತ್ತ ವಾಹನ ಸವಾರಿಗೆ ದಂಡ ಸೇರಿ ಒಟ್ಟು 3.8 ಲಕ್ಷಕ್ಕೂ ಅಧಿಕ ಮೊತ್ತ ಪಾವತಿಸಲಾಗಿದೆ ಎಂದು ವರದಿ ಆಗಿದೆ.