ಧಾರವಾಡ: ಇತ್ತೀಚೆಗೆ ನಗರಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಇದೀಗ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಓರ್ವ ಚಾಲಾಕಿ ಕಳ್ಳನನ್ನು ಹಿಡಿಯುವಲ್ಲಿ ಧಾರವಾಡ ಉಪನಗರ ಠಾಣೆಯ ಸಿ.ಪಿ.ಐ ದಯಾನಂದ ಹಾಗೂ ಟೀಂ ಯಶಸ್ವಿಯಾಗಿದೆ.

ಸಂಜಯ ಶಿವಾಜಿ ಚೌಹಾನ್ ಬಂಧಿತ ಚಾಲಾಕಿ ಬೈಕ್ ಕಳ್ಳನೆಂದು ಗುರುತಿಸಲಾಗಿದೆ. ಧಾರವಾಡ ನ್ಯೂ ಬಸ್ ನಿಲ್ದಾಣ, ಕಾರ್ಪೊರೇಷನ್ ವೃತ್ತ ಸೇರಿ ಜಿಲ್ಲಾಸ್ಪತ್ರೆ ಬಳಿ ಬೈಕ್ ಕಳ್ಳತನ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಉಪನಗರ ಠಾಣೆಯ ಸಿ.ಪಿ.ಐ ದಯಾನಂದ ಮತ್ತು ಟೀಂ ಕಾರ್ಯಾಚಾರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಯಿಂದ ಸುಮಾರು ಐದು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಯ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಈಗ ಆರೋಪಿಯನ್ನು ಕಂಬಿ ಹಿಂದೆ ತಳ್ಳಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.