
ದೇವನಹಳ್ಳಿ : ಮಹಾರಾಷ್ಟ್ರದ ಅಖಿಲ ಭಾರತ ಸರ್ವೋದಯ ಮಂಡಳ ರಾಷ್ಟ್ರೀಯ ಯುವ ಕೋಶ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿ ಸಹಯೋಗದಲ್ಲಿ ಪಟ್ಟಣದ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಸಭಾಂಗಣದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಹಾರಾಷ್ಟ್ರದ ಸೇವಾಗ್ರಾಮದ ಸರ್ವ ಸೇವಾ ಸಂಘದ ವ್ಯವಸ್ಥಾಪಕ ಟ್ರಸ್ಟಿ ಶೇಕ್ ಹುಸೇನ್, ಅಹಿಂಸೆ, ಸತ್ಯಾಗ್ರಹ ಹೋರಾಟದ ಬ್ರಹ್ಮಾಸ್ತ್ರ ಎಂಬುದನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಮೂಲಕ ವಿಶ್ವಕ್ಕೆ ಮಹಾತ್ಮ ಗಾಂಧೀಜಿ ತೋರಿಸಿಕೊಟ್ಟರು ಎಂದರು..

j3tvkannada
ಮಹಾತ್ಮ ಗಾಂಧೀಜಿ ಅವರು ಬೋಧಿಸಿದ ಆದರ್ಶ, ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಸರಳ ಜೀವನ, ಸಹೋದರತ್ವ, ರಾಷ್ಟ್ರೀಯ ಭಾವೈಕ್ಯತೆ, ಶಾಂತಿ, ಸೌಹಾರ್ದತೆ, ಸರ್ವಧರ್ಮ ಪ್ರಾರ್ಥನೆ ಇಂದಿಗೂ ಜೀವಂತವಾಗಿದೆ’ ಎಂದರು. ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಪ್ರದೀಪ, ಯುವ ಜನತೆ ಮೊಬೈಲ್ ಮೋಹಕ್ಕೆ ಒಳಗಾಗಿ ಸೋಮಾರಿಗಳಾಗುತ್ತಿದ್ದಾರೆ. ನೈಜ ಕ್ರೀಡೆಗಳಿಂದ ದೂರವಾಗಿ ಮೊಬೈಲ್ ಗೇಮ್ ವ್ಯಸನಕ್ಕೆ ಬಲಿಯಾಗಿದ್ದಾರೆ. ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಪ್ರಸ್ತಾಪಿಸಿದ್ದರು.
ಯುವ ಸಮಾವೇಶದ ಅಂಗವಾಗಿ ಎನ್.ಎಸ್.ಎಸ್, ಸರ್ವೋದಯ, ಗಾಂಧಿ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮರಳ್ಳಿಯ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಎನ್,ಎಸ್,ಸ್ ನಾಗೇಶ್ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ರಕ್ಷಿತಾ ಅವರು ಗ್ರಾಮೀಣ ಶಿಬಿರ ಮತ್ತು ರಾಷ್ಟ್ರೀಯ ಶಿಬಿರದ ಪರಿಚಯ ಮಾಡಿಕೊಟ್ಟರು.
ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಎನ್.ಎಸ್ಎ.ಸ್ ಸ್ವಯಂ ಸೇವಕರಾದ ಬಿ.ಎಮ್ ತರುಣ್, ರಕ್ಷಿತ್ ಶೆಟ್ಟಿ, ಪುಷ್ಪ,ದಿವ್ಯ, ಪುನೀತ್, ಲೋಕೇಶ್, ಶ್ರೇಯಸ್, ಮದನ್, ನಂದೀಶ್, ವರ್ಷಕ್, ನಿಖಿಲ್ ಚರ್ಚಾಗೋಷ್ಠಿ ನಡೆಸಿಕೊಟ್ಟರು. ಅಖಿಲ ಭಾರತ ಸರ್ವೋದಯ ಮಂಡಳಿಯ ಯುವ ಕೋಶದ ರಾಷ್ಟ್ರೀಯ ಸಂಯೋಜಕ ಡಾ.ವಿ.ಪ್ರಶಾಂತ, ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಉಪನ್ಯಾಸಕರಾದ ನಾಗೇಶ್, ಹರೀಶ್, ಸೌಜನ್ಯ, ಅಂಬಿಕಾ, ನಯನ ಮುಬಾರಕ್, ಅಂಬಿಕಾ ಹಾಜರಿದ್ದರು.