
ಚಿತ್ರದುರ್ಗ: ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ನೂತನ ಉಪ ನಿರ್ದೇಶಕರಾಗಿ ಕೆ.ತಿಮ್ಮಯ್ಯ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ನೂತನ ಉಪ ನಿರ್ದೇಶಕರನ್ನು ಪ್ರಾಚಾರ್ಯರು ಮತ್ತು ಉಪನ್ಯಾಸಕರು ಕಚೇರಿಯಲ್ಲಿ ಸನ್ಮಾನಿಸಿದರು.

j3tvkannada
ಸನ್ಮಾನ ಸ್ವೀಕರಿಸಿದ ನೂತನ ಉಪ ನಿರ್ದೇಶಕ ಕೆ.ತಿಮ್ಮಯ್ಯ ಮಾತನಾಡಿ, ನಾನು ಈ ಜಿಲ್ಲೆಯವನಾಗಿದ್ದು, ಈ ಜಿಲ್ಲೆಯಲ್ಲಿ ಉಪನ್ಯಾಸಕನಾಗಿ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಈ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಬಗ್ಗೆ ಅರಿತಿದ್ದೇನೆ ಎಂದು ಹೇಳಿದರು.
ನಾನು ಮುಂದಿನ ದಿನಗಳಲ್ಲಿ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಹಕಾರ ಪಡೆದು ದ್ವಿತೀಯ ಪಿ.ಯು.ಸಿ ಫಲಿತಾಂಶ ಹೆಚ್ಚಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಾಗೂ ನನ್ನ ಅಧಿಕಾರ ಅವಧಿಯಲ್ಲಿ ಉಪ ನಿರ್ದೇಶಕರ ನೂತನ ಕಟ್ಟಡ ನಿರ್ಮಿಸುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ಪ್ರಾಚಾರ್ಯ ವಸಂತ ಕುಮಾರ್, ಡಾ.ಬಿ.ಕೃಷ್ಣಪ್ಪ, ಲಲಿತಮ್ಮ, ಪುಷ್ಪಲತಾ, ಡಾ. ತಿಮ್ಮಣ್ಣ, ಭೀಮರೆಡ್ಡಿ, ಉಪನ್ಯಾಸಕರಾದ ಜಬೀವುಲ್ಲಾ, ವಿ.ಚನ್ನಬಸಪ್ಪ, ಚಂದ್ರಶೇಖರ್, ಅಬೀಬ್ವುಲ್ಲಾ, ಶಾಂತಕುಮಾರಿ, ಎಂ.ಶ್ರೀನಿವಾಸ್, ಡಾ.ರೇಖಾ, ಹೀನಾಕೌಸರ್, ವೀರಣ್ಣ ಇನ್ನು ಮುಂತಾದವರು ಭಾಗವಹಿಸಿದ್ದರು.