
ಕೇದಾರನಾಥ ಧಾಮವು ಹಿಂದೂ ಧರ್ಮೀಯರಿಗೆ ಪ್ರವಿತ್ರ ತೀರ್ಥಯಾತ್ರಾ ಸ್ಥಳವಾಗಿದೆ ಹಾಗೂ ಇದು ಚಾರ್ಧಾಮ್ ತೀರ್ಥಯಾತ್ರೆ ಕೇಂದ್ರವಾಗಿದೆ. ಇಲ್ಲಿ ಶಿವನ ದರ್ಶನವನ್ನು ಪಡೆದುಕೊಳ್ಳಲು ಪ್ರತೀ ವರ್ಷ ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ. ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಕೇದಾರನಾಥವು ಶ್ರಿಮಂತ ಧಾರ್ಮಿಕ ಕಥೆಗಳನ್ನು ಮತ್ತು ಪೌರಾಣಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ. ದಂತಕಥೆಯ ಪ್ರಕಾರ, ಕೇದಾರನಾಥವನ್ನು ಪಾಂಡವರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಈ ಪವಿತ್ರ ಸ್ಥಳವು ಭಗವಂತನನ್ನು ಪೂಜಿಸಲು ಮತ್ತು ದೈವಿಕ ಸಂಬಂಧ ಹೊಂದಲು ಸಹಾಯ ಮಾಡುತ್ತದೆ. ಈ ದೇವಾಲಯದ ಶ್ರೀಮಂತ ಪರಂಪರೆಯು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕುತೂಹಲಕಾರಿ ವಿಚಾರಗಳಿದ್ದರೂ ಇದೊಂದು ತುಂಬಾನೇ ಪ್ರಶ್ನಾರ್ಹವಾಗಿದೆ. ಈ ದೇವಾಲಯಕ್ಕೆ ಕೇರಳದಿಂದಲೇ ಪ್ರಧಾನ ಅರ್ಚಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

j3tvkannada
ಕೇದಾರನಾಥ ಸನ್ನಿಧಾನ ಎಷ್ಟು ವಿಶೇಷವಾಗಿದೆಯೋ ಅಷ್ಟೇ ಇಲ್ಲಿ ನಡೆಸಲಾಗುವ ಪ್ರತಿಯೊಂದು ಆಚರಣೆಗಳು ಅಷ್ಟೇ ವಿಶೇಷವಾಗಿರುತ್ತದೆ. ಕೇದಾರನಾಥ ದೇವಾಲಯಕ್ಕೆ ಪ್ರಧಾನ ಅರ್ಚಕರನ್ನು ಕೇವಲ ರಾವಲ್ ಸಮುದಾಯಕ್ಕೆ ಸೇರಿದವರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ರಾವಲ್ ಸಮುದಾಯದ ಜನರು ಕ್ರಿ.ಶ 10 ನೇ ಶತಮಾನದಿಂದಲೂ ಕನ್ನಡದಲ್ಲಿ ಪ್ರಾಚೀನ ಆಚರಣೆಗಳನ್ನು ಮತ್ತು ಮಂತ್ರಗಳನ್ನು ಪಠಿಸಿಕೊಂಡು, ಆಚರಣೆಗಳನ್ನು ಪಾಲಿಸಿಕೊಂಡು ಬಂದವರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಇನ್ನೊಂದು ಕುತೂಹಲಕಾರಿ ಅಂಶವೆಂದರೆ, ಮುಖ್ಯ ಅರ್ಚಕರು ಆಚರಣೆಗಳನ್ನು ನಡೆಸುವುದಿಲ್ಲ, ಬದಲಿಗೆ ಇಲ್ಲಿ ಮುಖ್ಯ ಅರ್ಚಕರನ್ನು ಸಹಾಯಕರಿಗೆ ನೇಮಿಸುತ್ತಾರೆ. ದೇವಾಲಯದ ಐದು ಪ್ರಧಾನ ಅರ್ಚಕರು ಪರ್ಯಾಯವಾಗಿ ಮುಖ್ಯ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾರೆ. ಕೇದಾರನಾಥ ದೇಗುಲದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ಕೇರಳದ ನಂಬೂದಿರಿ ಬ್ರಾಹ್ಮಣ ಪುರೋಹಿತರನ್ನು ವಿಶೇಷವಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಚರಣೆಯು ಆದಿ ಶಂಕರಾಚಾರ್ಯರಿಂದ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

j3tvkannada
ಆದಿ ಶಂಕರಾಚಾರ್ಯರ ಜೀವನ ಚರಿತ್ರೆಯ ಪ್ರಕಾರ, 8ನೇ ಶತಮಾನದ ತತ್ವಜ್ಞಾನಿಯೆನಿಸಿಕೊಂಡ ಆದಿ ಶಂಕರಾಚಾರ್ಯರು ಕೇದಾರನಾಥದ ಬಳಿ ದೈವಾಧೀನರಾದರು ಎಂದು ಹೇಳಲಾಗುತ್ತದೆ. ಇನ್ನು ಕೆಲವೊಂದು ಪುರಾವೆಗಳು ಆದಿ ಶಂಕರಾಚಾರ್ಯರು ಕಾಂಚೀಪುರಂನಲ್ಲಿ ದೈವಾಧೀನರಾದರು ಎಂದು ಹೇಳಲಾಗಿದೆ. ಕೇದಾರನಾಥದ ಬಳಿ ಆದಿ ಶಂಕರರ ಸಮಾಧಿಯೆಂದು ಗುರುತಿಸಲಾಗುವ ಸ್ಥಳದಲ್ಲಿ ಇಂದಿಗೂ ಒಂದು ಸ್ಮಾರಕವನ್ನು ನಾವು ನೋಡಬಹುದಾಗಿದೆ. ಕೃತ್ಯ-ಕಲ್ಪತರುವಿನಲ್ಲಿ ಉಲ್ಲೇಖಿಸಿರುವ ಪ್ರಕಾರ, 12 ನೇ ಶತಮಾನದ ಸುಮಾರಿಗೆ ಕೇದಾರನಾಥ ದೇವಾಲಯವು ಒಂದು ಪ್ರಮುಖ ಯಾತ್ರಾ ಸ್ಥಳವಾಗಿತ್ತು ಎನ್ನಲಾಗಿದೆ. ಜೀವನ ಚರಿತ್ರೆಗಳ ಪ್ರಕಾರ, 8 ನೇ ಶತಮಾನದ ತತ್ವಜ್ಞಾನಿ ಆದಿ ಶಂಕರರು ಕೇದಾರನಾಥದ ಬಳಿ ನಿಧನರಾದರು, ಕೆಲವು ಆವೃತ್ತಿಗಳಲ್ಲಿ ಕಾಂಚೀಪುರಂ ಮತ್ತೊಂದು ಸಾಧ್ಯತೆಯಾಗಿ ಸೂಚಿಸಲಾಗಿದೆ. ಕೇದಾರನಾಥದ ಬಳಿ ಅವರ ಸಮಾಧಿ ಸ್ಥಳವೆಂದು ಗುರುತಿಸಲಾದ ಸ್ಥಳದಲ್ಲಿ ಒಂದು ಸ್ಮಾರಕವಿದೆ. ಇದು 12 ನೇ ಶತಮಾನದ ವೇಳೆಗೆ ಒಂದು ಪ್ರಮುಖ ಯಾತ್ರಾ ಸ್ಥಳವಾಗಿತ್ತು ಮತ್ತು ಕೃತ್ಯ-ಕಲ್ಪತರುವಿನಲ್ಲಿ ಉಲ್ಲೇಖಿಸಲಾಗಿದೆ. ಒಂದು ದಂತಕಥೆಯ ಪ್ರಕಾರ, ಆದಿ ಶಂಕರರು ಬದರಿನಾಥ ಮತ್ತು ಉತ್ತರಾಖಂಡದ ಇತರ ದೇವಾಲಯಗಳೊಂದಿಗೆ ಈ ದೇವಾಲಯವನ್ನು ಪುನಃಸ್ಥಾಪಿಸಿದರು ಮತ್ತು ಅವರು ಕೇದಾರನಾಥದಲ್ಲಿ ಮಹಾಸಮಾಧಿಯನ್ನು ಸಾಧಿಸಿದರು ಎಂದು ಊಹಿಸಲಾಗಿದೆ.
ಕೇದಾರನಾಥದಲ್ಲಿನ ಶಿವಲಿಂಗವನ್ನು ಪೂಜೆ ಮಾಡುವುದಕ್ಕಾಗಿ ದಕ್ಷಿಣ ಭಾರತದ ಪುರೋಹಿತರಾದ ರಾವಲ್ಗಳು ಮತ್ತು ಸ್ಥಳೀಯ ಜಮ್ಲೋಕಿ ಬ್ರಾಹ್ಮಣರನ್ನು ಆಯೋಜಿಸಲಾಗುತ್ತದೆ. ಯಾತ್ರಿ ಪೂಜೆಯನ್ನು ತೀರ್ಥ ಪುರೋಹಿತ ಬ್ರಾಹ್ಮಣರು ನಡೆಸುತ್ತಾರೆ. ಐತಿಹಾಸಿಕ ನಂಬಿಕೆಗಳ ಪ್ರಕಾರ, ರಾವಲ್ ಸಂಪ್ರದಾಯಕ್ಕೆ ಸೇರಿದ ಅರ್ಚಕರೊಬ್ಬರು ಪ್ರತಿದಿನವೂ ಕೇದಾರನಾಥ ಮತ್ತು ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ ಕೆಲವು ಆಚರಣೆಗಳನ್ನು ಪಾಲಿಸುತ್ತಿದ್ದರು ಎಂದು ಹೇಳಲಾಗಿದೆ. ಇದು ಈ ದೇವಾಲಯಗಳ ಕಡೆಗೆ ರಾವಲ್ ಪುರೋಹಿತರ ದೃಢವಾದ ಧಾರ್ಮಿಕ ಬಾಂಧವ್ಯ ಮತ್ತು ಭಕ್ತಿಯನ್ನು ಒತ್ತಿಹೇಳಲು ಪ್ರಾರಂಭಿಸಿದ್ದರಿಂದ ಅಂದಿನಿಂದ ಇಂದಿನವರೆಗೆ ಕೇರಳದ ನಂಬೂದರಿ ಬ್ರಾಹ್ಮಣರನ್ನು ಕೇದಾರನಾಥದ ಪ್ರಧಾನ ಅರ್ಚಕರನ್ನಾಗಿ ಆಯ್ದುಕೊಳ್ಳಲಾಗುತ್ತದೆ. ಕೆಲವೊಂದು ಪುರಾವೆಗಳು ಆದಿ ಶಂಕರರಿಂದ ಕೇದಾರನಾಥದಲ್ಲಿ ಕೇರಳ ಬ್ರಾಹ್ಮಣರಿಂದ ಪೂಜೆ, ಆಚರಣೆಗಳು ಪ್ರಾರಂಭವಾಯಿತು ಎಂದು ಹೇಳಿದರೆ, ಇನ್ನು ಕೆಲವೊಂದು ನಂಬಿಕೆಗಳು ಹಾಗೂ ಕಥೆಗಳು ಇಲ್ಲಿ ಕೇರಳ ಅರ್ಚಕರ ಸಂದರ್ಶನ ಹೆಚ್ಚಾಗಿರುವುದರಿಂದ ಪ್ರಧಾನ ಅರ್ಚಕರನ್ನಾಗಿ ಅವರನ್ನೇ ಆಯ್ದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.