
ಬೆಂಗಳೂರು ಗ್ರಾಮಾಂತರ: ಇಟಾಚಿ ಟರ್ಮಿನಲ್ ಸೊಲ್ಯೂಷನ್ ಕಂಪನಿಯು ದೊಡ್ಡಬಳ್ಳಾಪುರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದು, ನೂತನ ಕೊಠಡಿಗಳನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯೀದ್ ಅನೀಸಾ, ಇಟಾಚಿ ಟರ್ಮಿನಲ್ ಸೊಲ್ಯೂಷನ್ ಕಂಪನಿಯ ವ್ಯವಸ್ಥಾಪಕ ಸಿ.ಶಿವರಾಮನೆ, ನಿರ್ದೇಶಕರಾದ ನಕ್ತಾನಿಸಾನ್, ಮೋರಿಟಾಸಾನ್, ಶರತ್ ಸಾನ್, ಶಾಲೆಯ ಮುಖ್ಯ ಶಿಕ್ಷಕ ಕೇಶವಮೂರ್ತಿ, ಮುಖಂಡರಾದ ನಂಜೇಗೌಡ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಜೈಕುಮಾರ್ ಭಾಗಿಯಾಗಿದ್ದರು.