
ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಇರುವ ರಾಮಂಜನೇಯಲು (68) ಸ್ಥಿತಿ ನೋಡಿದರೆ ಎಂತವರಿಗೂ ಕಣ್ಣೀರು ಬರುತ್ತದೆ. ಮೈ ಮೇಲೆ ಸರಿಯಾಗಿ ಬಟ್ಟೆಯಿಲ್ಲ. ಎದ್ದು ಓಡಾಡೋ ಸ್ಥಿತಿಯಲ್ಲಿಯು ಕೂಡ ಇಲ್ಲಾ. ಮಲಗಿದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿಕೊಳುತ್ತಾರೆ. ಒಂದು ತಿಂಗಳಲ್ಲಾ, ಎರಡು ತಿಂಗಳಲ್ಲಾ, ಬರೋಬ್ಬರಿ ಒಂಬತ್ತು ತಿಂಗಳಿಂದ ಮಲಗಿರುವ ಸ್ಥಿತಿಯಲ್ಲಿಯೇ ಇದ್ದಾರೆ.

ವೃದ್ಧನ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿ ಬಿಟ್ಟು ಹೋಗಿದ್ದಾರೆ. ಮಕ್ಕಳು ಮತ್ತು ಸಹೋದರ ಇದ್ದರೂ ಯಾರೂ ಸಹ ಅವರನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಲು ಬಂದಿಲ್ಲ.ಇನ್ನು ರಾಮಂಜನೇಯಲು, ಚೆನ್ನಾಗಿಯೇ ಇದ್ದರಂತೆ. ಆದರೆ ಇವರ ಪತ್ನಿ ಅನೇಕ ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದಾರೆ. ರಾಮಂಜನೇಯಲು ರವರಿಗೆ ಆರು ಜನ ಮಕ್ಕಳು,ಆದರೆ ಅವರು ಎಲ್ಲಿದ್ದಾರೆ ಅಂತ ಸರಿಯಾದ ಮಾಹಿತಿ ದೊರೆತಿಲ್ಲ. ನನ್ನ ಈ ದುಸ್ಥಿತಿಗೆ ತನ್ನ ಸಹೋದರನೇ ಕಾರಣ ಎಂದು ರಾಮಂಜನೇಯಲು ಆರೋಪಿಸುತ್ತಿದ್ದಾರೆ. ಸದ್ಯ ಆಸ್ಪತ್ರೆ ಸಿಬ್ಬಂದಿಗಳೆ ಅವರಿಗೆ ಸಹಾಯ ಮಾಡುತ್ತಿದ್ದಾರೆ.