
ಧಾರವಾಡ: ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ ಬೇಲ್ ಪಡೆದಿದ್ದ ವಿನಯ್ ಕುಲಕರ್ಣಿಗೆ ಹಿನ್ನಡೆಯಾಗಿದ್ದು ಸುಪ್ರೀಂಕೋರ್ಟ್ ಅವರ ಜಾಮೀನು ರದ್ದುಗೊಳಿಸಿದೆ. ಸಾಕ್ಷಿಗಳ ಮೇಲೆ ಒತ್ತಡ ಹಾಕಿದ್ದಾರೆ ಅಂತ ಆರೋಪಿಸಿ, ಜಾಮೀನು ರದ್ದು ಕೋರಿ ಸಿ.ಬಿ.ಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ವಿನಯ್ ಕುಲಕರ್ಣಿ ಜಾಮೀನು ರದ್ದು ಮಾಡಿದೆ. ಹೀಗಾಗಿ ಕಾಂಗ್ರೆಸ್ ಶಾಸಕ ಮತ್ತೆ ಜೈಲಿಗೆ ಹೋಗುವ ಭೀತಿ ಎದುರಾಗಿದೆ.

j3tvkannada
ಇನ್ನು ವಿನಯ್ ಕುಲಕರ್ಣಿ ಜಾಮೀನು ರದ್ದು ವಿಚಾರಕ್ಕೆ ಯೋಗೇಶಗೌಡ ಸೋದರ ಗುರುನಾಥಗೌಡ ಪ್ರತಿಕ್ರಿಯೆ ನೀಡಿದ್ದಾರೆ. 9 ವರ್ಷದ ಹಿಂದೆ ನಮ್ಮ ಸಹೋದರನ ಹತ್ಯೆ ಆಗಿತ್ತು. 9 ವರ್ಷದಿಂದ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಹಿಂದೆಯೇ ಜಾಮೀನು ಕೊಡದಂತೆ ಕೇಳಿದ್ದೆವು ಆದರೆ ಆಗ ಸುಪ್ರಿಂ ಕೋರ್ಟ್ ಜಾಮೀನು ಕೊಟ್ಟಿತ್ತು. ನಾವು ಇತ್ತೀಚೆಗೆ ಜಾಮೀನು ರದ್ಧತಿಗೆ ಕೇಳಿದ್ದೆವು.
ಈಗ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ ಎಂದಿದ್ದಾರೆ. ಸಿಬಿಐನವರು ಸುಪ್ರೀಂಕೋರ್ಟ್ಗೆ ಹೋಗಿದ್ರು. ಸರಿಯಾದ ದಾಖಲೆಗಳನ್ನು ಸಿಬಿಐ ಕೊಟ್ಟಿತ್ತು. ಹೀಗಾಗಿ ಜಾಮೀನು ರದ್ದು ಆಗಿದೆ. ಎಲ್ಲ ಸಾಕ್ಷಿಗಳು ಸತ್ಯಹೇಳಬೇಕು. ಯಾರೂ ಹೆದರಬಾರದು, ನಮ್ಮ ತಮ್ಮನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಅಂತ ಗುರುನಾಥ್ ಗೌಡ ಹೇಳಿದ್ದಾರೆ.