
ದಕ್ಷಿಣ ಕನ್ನಡ(ಮಂಗಳೂರು) : ಸಾಲು ಸಾಲು ನಡೆದ ಕೊಲೆಗಳಿಂದ ಕಡಲನಗರಿ ಇನ್ನು ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೋಮು ಕಿಡಿ ಹಚ್ಚುತ್ತಿದ್ದರ ವಿರುದ್ಧ ಪೊಲೀಸರು ಸಮರ ಸಾರಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಟ್ರೋಲ್ ಮಾಡಿದವರನ್ನ ರೋಸ್ಟ್ ಮಾಡಲಾಗಿದ್ದು, ಮಂಗಳೂರು ಪೊಲೀಸರ ಮೆಗಾ ಆಪರೇಷನ್ಗೆ ಟ್ರೋಲ್ ವೀರರು ನಲುಗಿ ಬೆಂಡಾಗಿದ್ದಾರೆ. ವಿದೇಶದಲ್ಲಿ ಕೂತು ನಾವು ಆಡಿದ್ದೇ ಆಟ ಎನ್ನುವವರಿಗೂ ಶಾಕ್ ನೀಡಿದ್ದಾರೆ.

j3tvkannada
ಹೆಜಮಾಡಿಯ ಮೊಹಮ್ಮದ್ ಅಸ್ಲಾಂ, ಸುರತ್ಕಲ್ ಕಾಟಿಪಳ್ಳದ ಚೇತನ್, ನಿತಿನ್ ಅಡಪ, ಫರಂಗಿಪೇಟೆಯ ರಿಯಾಜ್ ಇಬ್ರಾಹಿಂ, ಬೆಂಗ್ರೆಯ ಜಮಾಲ್ ಝಾಕೀರ್ ಮತ್ತು ಹಳೆಯಂಗಡಿಯ ಗುರುಪ್ರಸಾದ್ ಬಂಧಿತರು. ಸೌದಿ ಅರೇಬಿಯಾದಲ್ಲಿ ಕೂತು ಪ್ರಚೋದನಾಕಾರಿ ಪೋಸ್ಟ್ ಹಾಕುತ್ತಿದ್ದ ಮೊಹಮ್ಮದ್ ಅಸ್ಲಾಂ, ರಿಯಾಜ್ ಇಬ್ರಾಹಿಂಗೆ ಲುಕ್ ಔಟ್ ನೋಟೀಸ್ ಜಾರಿ ಮಾಡಿ ಬಂಧಿಸಲಾಗಿದೆ. ಮುಸ್ಲಿಂ ವ್ಯಕ್ತಿಯ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿಸಿ ಚೇತನ್ ಪೋಸ್ಟ್ ಮಾಡುತ್ತಿದ್ದ. ಝಾಕೀರ್ ಎಂಬಾತನಿಂದ ರಹಿಮಾನ್ ಕೊಲೆಗೆ ಒಂದಕ್ಕೆರಡು ಎಂಬಂತೆ ಪ್ರತೀಕಾರದ ಪೋಸ್ಟ್ ಹಾಕಲಾಗಿತ್ತು. ಆದರೆ ಪೊಲೀಸರ ವಿಚಾರಣಾ ಶೈಲಿಗೆ ಹೆದರಿ ಕಣ್ಣೀರು ಹಾಕಿ ಇನ್ಮುಂದೆ ಈ ತರ ಮಾಡಲ್ಲ ಎಂದು ಕ್ಷಮೆಯಾಚಿಸಿದ್ದಾನೆ.
ಸೌದಿ ಅರೇಬಿಯಾದಲ್ಲಿ ಕೂತು ಮಂಗಳೂರಿನ ಕೋಮು ಸ್ವಾಸ್ತ್ಯ ಕದಡಿಸಲು ಕೆಲ ಪೇಜ್ಗಳಿಂದ ಸಂಚು ರೂಪಿಸಲಾಗಿತ್ತು. ಮಂಗಳೂರು, ಉಡುಪಿ, ಸುರತ್ಕಲ್, ಫರಂಗಿಪೇಟೆಯ ಐವರು ಕಿಡಿಗೇಡಿಗಳ ಇನ್ಸ್ಟಾಗ್ರಾಮ್ ಖಾತೆಗಳು ಬಂದ್ ಆಗಿವೆ. ಮುಸ್ಲಿಮರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಖರೀದಿಸಿ ಹಿಂದೂಗಳಿಗೆ ಪ್ರಚೋದನೆ ನೀಡಲಾಗಿದೆ. ಕೊಲೆ ಬೆದರಿಕೆ ಸಹಿತ ಪ್ರಚೋದನಕಾರಿ ಪೋಸ್ಟ್ ಹಾಕಲಾಗುತ್ತಿತ್ತು. ವಿದೇಶದಲ್ಲಿದ್ದರೂ ಬೆಂಬಿಡದೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಸದ್ಯ ಮಂಗಳೂರು ಖಾಕಿ ಬ್ರೇಕ್ ಹಾಕಿದೆ.