
ಹಾಸನ: ರಾಮನವಮಿಯ ಅಂಗವಾಗಿ ಶನಿವಾರ ಕುರುಹಿನಶೆಟ್ಟಿ ಸಮುದಾಯದ ಹಿರಿಯರು, ಯುವಕರು, ಯುವತಿಯರು, ಮಹಿಳೆಯರು, ಬಾಲಕ, ಬಾಲಕಿಯರು ಹೋಳಿ ಆಡಿ ಸಂಭ್ರಮಿಸಿದರು.

j3tvkannada
ಸಮುದಾಯದ ಹಿರಿಯರು ಧನುರ್ಮಾಸದ ಭಜನೆ, ಶ್ರೀರಾಮನವಮಿ, ಹೋಳಿಯನ್ನು ಏಳು ದಶಕಗಳ ಹಿಂದೆ ಪ್ರಾರಂಭಿಸಿದ್ದು, ಇಂದಿಗೂ ಶ್ರದ್ದಾಭಕ್ತಿಯಿಂದ ಮುಂದುವರಿಸಿದ್ದಾರೆ. ಬೆಳಿಗ್ಗೆಯಿಂದ ಹಿರಿಯರು, ಯುವಕರು, ಯುವತಿಯರು, ಮಹಿಳೆಯರು, ಬಾಲಕ, ಬಾಲಕಿಯರು ವಿವಿಧ ಬಣ್ಣಗಳನ್ನು ಪರಸ್ಪರರ ಮುಖಕ್ಕೆ ಬಳಿದು, ಬಣ್ಣದ ನೀರನ್ನು ಎರಚಿಕೊಂಡು ಸಂಭ್ರಮಿಸಿದರು. ರಾಮಮಂದಿರದಲ್ಲಿ ಸೀತಾ, ರಾಮ, ಲಕ್ಷ್ಮಣ ಹಾಗೂ ಹನುಮಂತನ ಉತ್ಸವ ಮೂರ್ತಿಗಳನ್ನು ಪೂಜಿಸಿ, ಅಲಂಕರಿಸಿದ ನಂತರ ಅಡ್ಡೆಯಲ್ಲಿ ಕೂರಿಸಿದರು. ಅಡ್ಡೆ ಹೊತ್ತ ಯುವಕರು ಉರಿಬಿಸಿಲನ್ನೂ ಲೆಕ್ಕಿಸದೆ ಬಡಾವಣೆಯಲ್ಲಿ ಸಾಗಿದರು.
ಜನರು ಪೂಜೆ ಸಲ್ಲಿಸಿ, ಭಕ್ತರಿಗೆ, ಕೋಸಂಬರಿ, ಮಜ್ಜಿಗೆ ವಿತರಿಸಿದರು. ಕುರುಹಿನಶೆಟ್ಟಿ ಸಂಘಟನೆಯ ಅಧ್ಯಕ್ಷ ಎಚ್.ಎಸ್. ಸುದರ್ಶನ್, ಪುರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಮಹಿಳಾ ವಿಭಾಗದ ಅಧ್ಯಕ್ಷೆ ಇಂದು ನಾರಾಯಣ್, ಯುವಕರ ಸಂಘದ (ಗ್ರೀನ್ ಬಾಯ್ಸ್) ಅಧ್ಯಕ್ಷ ವಿಶೇಷ್ ಎನ್.ಮೂರ್ತಿ, ಕುರುಹಿನಶೆಟ್ಟಿ ಮಿತ್ರ ವೃಂದದ ಅಧ್ಯಕ್ಷ ಆರ್.ಕೆ. ಗುರುರಾಜ್, ರಾಮಲಿಂಗಾಂಜನೇಯಸ್ವಾಮಿ ದೇವಸ್ಥಾನದ ಮಂಡಳಿ ಅಧ್ಯಕ್ಷ ಆರ್. ರಮೇಶ್ ಹಾಗೂ ಈ ಸಂಘಟನೆಗಳ ಸದಸ್ಯರು, ರಂಗಸ್ವಾಮಿ, ಕೃಷ್ಣಪ್ಪ, ರಾಘವೇಂದ್ರ, ಮನುಕುಮಾರ್, ಯೋಗಾನರಸಿಂಹ, ನಾಗರಾಜ್, ನರಸಿಂಹಮೂರ್ತಿ ಶಾಸ್ತ್ರಿ, ಎನ್ ಗೋಪಾಲ, ಶ್ರೀನಿವಾಸಮೂರ್ತಿ, ಪ್ರದೀಪ್ ಕುಮಾರ್, ಸುಬ್ರಹ್ಮಣ್ಯ, ಚಿರಂಜೀವಿ, ಬಾಬಣ್ಣ, ಬಿ.ಎನ್. ಜಯಕುಮಾರ್, ಸುನೀಲ್, ಆರ್.ಕೆ.ಜಯರಾಮ್, ಎಚ್.ಪಿ.ಮುರಳೀಧರ, ಧನಂಜಯ, ಹರೀಶ್, ಪ್ರಮೋದ್, ಪುಟ್ಟರಾಜು, ಕೃಷ್ಣಕಾಂತ್, ಶ್ರೀನಿವಾಸ್, ಉಮಾ ಗಣೇಶ್, ಎಚ್.ಬಿ.ನಾಗವೇಣಿ, ಚೈತ್ರಾ, ಜೈ ಮಾರುತಿ ಯುವಕರ ಸಂಘದ ಪದಾಧಿಕಾರಿಗಳು ಹೋಳಿ ಆಡಿ ಸಂಭ್ರಮಿಸಿದರು.