
ಯಾದಗಿರಿ: ಬೇಸಿಗೆಯಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ನೀರಿನ ಸೇವೆ ಮಾಡುತ್ತಿರುವುದು ಪುಣ್ಯದ ಕಾರ್ಯವಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.

j3tvkannada
ವಡಗೇರಾ ತಾಲ್ಲೂಕಿನಲ್ಲಿ ಇಕ್ಷು ಫಾರ್ಮ್ಸ್ ಕಂಪನಿ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಳವಾಗುತ್ತಿದೆ. ಇಂತಹ ಹೊತ್ತಿನಲ್ಲಿ ದಾಹವಿಲ್ಲದಿದ್ದರು ಸಹ ಆಗಾಗ ನೀರು ಕುಡಿಯುತ್ತಿರಬೇಕು. ಬೇಸಿಗೆ ಕಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಕಂಪನಿ ಮಾಲೀಕ ಸಿ.ಜೆ.ಚೇತನ್ ಮಾತನಾಡಿದರು. ಕಂಪನಿಯ ವ್ಯವಸ್ಥಾಪಕ ರಾಜಶೇಖರ, ಕರವೇ ಜಿಲ್ಲಾ ಉಪಾಧ್ಯಕ್ಷ ಚೌಡಯ್ಯ ಬಾವೂರ, ಶರಭಲಿಂಗ ಕಂಟೆಕಾಯಿ, ದಾವಲ್ ಸಾಬ ಮರಡಿ, ರಾಚಪ್ಪ ಮಡಿವಾಳ, ಮೌಲಾ ಖುರೇಶಿ, ಅದಮ ಕೋಳಿ, ವೆಂಕಟೇಶ ಮಾಚನೂರು, ಬಸವರೆಡ್ಡಿ ಗೌಡ ಅಭಿಶ್ಯಾಳ, ಸಿದ್ದು ಪೂಜಾರಿ, ಶರಣು ಅಂಗಡಿ, ಸುರೇಶ ವಿಶ್ವಕರ್ಮ, ಐಲಿಂಗ, ಜಾಫರ್, ದೇವು ಮದನೂರ, ಗೌಸುದ್ದೀನ್, ಈಶಪ್ಪ ಪಟ್ಟಿದಾರ, ಮರಿಲಿಂಗ ಉಪಸ್ಥಿತರಿದ್ದರು.