
ಹೊಸಪೇಟೆ (ವಿಜಯನಗರ): ಜಿಲ್ಲೆಯ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಒತ್ತಾಯಿಸಿ ಹಾಗೂ ಕಾರ್ಮಿಕರಿಗೆ ನ್ಯಾಯ ಕೇಳಿ ಮನವಿ ಸಲ್ಲಿಸಲಾಯಿತು.

j3tvkannada
ನರೇಗಾ ಕೆಲಸ ಮಾಡುವವರಗೆ 100 ದಿನದ ಕೆಲಸದ ಭದ್ರತೆ ನೀಡಬೇಕು ಮತ್ತು ಕಳೆದ ಮೂರು ತಿಂಗಳಿಂದ ಕೂಲಿ ಮಾಡಿದ್ದಕ್ಕೆ ಹಣ ಸಂದಾಯವಾಗಿಲ್ಲ. ಅದನ್ನು ತಕ್ಷಣ ನೀಡಬೇಕು ಎಂಬ ಪ್ರಮುಖ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದೆ ಇಡಲಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಿದೆ, ಹೀಗಾಗಿ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ(ಎನ್ಎಂಎಂಎಸ್) ಸೌಲಭ್ಯ ಒದಗಿಸಬೇಕು. ಜಾಬ್ ಕಾರ್ಡ್ ವಿತರಣೆ ಮಾಡಲು ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು, ನರೇಗಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಸಾವನ್ನಪ್ಪಿದರೆ ನೀಡುವ ಪರಿಹಾರ ₹2 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಲಾಯಿತು.
ನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರಂತೆಯೇ ಪರಿಗಣಿಸಬೇಕು, ಕೂಸಿನ ಮನೆಗಳು ನಾಮಕಾವಸ್ಥೆಗೆ ಮಾತ್ರ ಇದ್ದು, ಸರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸಹ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಹೊಸಪೇಟೆ ತಾಲ್ಲೂಕು ಕಾರ್ಮಿಕ ಮುಖಂಡರಾದ ಸಾವಿತ್ರಮ್ಮ, ಹುಲುಗಪ್ಪ, ಹಡಗಲಿಯ ಮಹಾಬಲೇಶ್, ಈರಮ್ಮ, ಕರಿಬಸಪ್ಪ, ನಾಗರಾಜ್, ಹಗರಿಬೊಮ್ಮನಹಳ್ಳಿಯ ಬಸಲಿಂಗಮ್ಮ ದುರುಗಪ್ಪ, ನಾಗರಾಜ ಇದ್ದರು.