
ಬೆಂಗಳೂರು ಗ್ರಾಮಾಂತರ: ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

j3tvkannada
ಜಿಗಣಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಕರಗ ವೀಕ್ಷಿಸಲು ಆಗಮಿಸಿದ್ದರು. ಜಿಗಣಿಯ ಪ್ರಮುಖ ಬೀದಿಗಳಲ್ಲಿ ಕರಗವು ಸಂಚರಿಸಿತು. ತಮಟೆ ಮತ್ತು ಡೋಲಿನ ನಾದಸ್ವರಕ್ಕೆ ತಕ್ಕಂತೆ ಕರಗವು ಹೆಜ್ಜೆ ಹಾಕಿತು. ಜಿಗಣಿ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕರಗ ಹೊತ್ತು ಗೊಮ್ಮಟೇಶ್ ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ದೇವಾಲಯದಿಂದ ಹೊರ ಬರುತ್ತಿದ್ದಂತೆ ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಕರಗವು ಹೊರ ಬರುತ್ತಿದ್ದಂತೆ ವೀರಕುಮಾರರು ಕರಗ ಸ್ವಾಗತಿಸಿದರು. ಜಯಘೋಷಗಳೊಂದಿಗೆ ಕರಗವನ್ನು ಬರಮಾಡಿಕೊಂಡರು. ಮಲ್ಲಿಗೆ ಹೂವುಗಳನ್ನು ಕರಗಕ್ಕೆ ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಜಿಗಣಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗವು ಸಂಚರಿಸಿತು. ಮನೆಗಳ ಬಳಿ ಪೂಜೆ ಮೂಲಕ ಕರಗ ಸ್ವಾಗತಿಸಿದರು. ಕರಗದ ಪ್ರಯುಕ್ತ ಜಿಗಣಿಯ ರಸ್ತೆ ಉದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕರಗದ ನಿಮಿತ್ತ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.