
ವಿಜಯನಗರ: 17 ವರ್ಷಗಳಿಂದ ರದ್ದಾಗಿದ್ದ ಚಿರಿಬಿ ಶ್ರೀ ಮೂಗಬಸವೇಶ್ವರ ರಥೋತ್ಸವವನ್ನು ಈ ಬಾರಿ ಉಭಯ (ಚಿರಿಬಿ ಮತ್ತು ರಾಂಪುರ) ಗ್ರಾಮಸ್ಥರ ಸಹಕಾರ ಹಾಗೂ ಕಾನೂನು ಮಾರ್ಗದರ್ಶನದಲ್ಲಿ ನಡೆಸುವ ಬಗ್ಗೆ ವಿಜಯನಗರದ ಜಿಲ್ಲಾಧಿಕಾರಿ ಅವರು ಭಕ್ತರಲ್ಲಿ ಆಶಾ ಭಾವನೆ ಮೂಡಿಸಿದ್ದಾರೆ.

j3tvkannada
ಜಿಲ್ಲಾಧಿಕಾರಿಗಳು ಎಂ.ಎಸ್ ಧಿವಾಕರ್ ನಿಮಿತ್ತ ಚಿರಿಬಿ ಶ್ರೀ ಮೂಗಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ರಥೋತ್ಸವವು ನಡೆಯುವ ಮಾರ್ಗ ಪರಿಶೀಲಿಸಿ, ದೇವಸ್ಥಾನದ ಜಾಗವನ್ನು ಸಂಪೂರ್ಣ ಹದ್ದು ಬಸ್ತು ಮಾಡುವಂತೆ ಹಾಗೂ ದೇವಸ್ಥಾನದಲ್ಲಿ ಅಭಿವೃದ್ದಿ ಪಡೆಸುವಂತೆ, ಪ್ರತಿ ಅಮಾವಾಸ್ಯೆಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸುವಂತೆ ದತ್ತಿ ಇಲಾಖೆ ಇ.ಒ ಹನುಮಂತಪ್ಪ ಅವರಿಗೆ ಸೂಚಿಸಿದರು.
ಇದೇ ವೇಳೆ ದೇವಸ್ಥಾನದ ವಿಚಾರವಾಗಿ ಕಾನೂನು ಮೊರೆ ಹೋಗಿದ್ದ ಚಿರಿಬಿ ಮತ್ತು ರಾಂಪುರ ಗ್ರಾಮಸ್ಥರ ಅಭಿಪ್ರಾಯವನ್ನು ಕೇಳಿ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಮೂಗಬಸವೇಶ್ವರ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಯ ಸುಪರ್ಧಿಯಲ್ಲಿದ್ದು ರಥೋತ್ಸವದ ಬಗ್ಗೆ ಉಭಯ ಗ್ರಾಮಸ್ಥರು ಅಸ್ಥಕ್ಷೇಪ ಮಾಡುವಂತಿಲ್ಲ ಅಲ್ಲದೆ ತಾವು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ರಥೋತ್ಸವ ನಡೆಸದಂತೆ ಕೋರಿಲ್ಲ. ಲಾಂಡ್ ಆಡ್ರ್ ಮೀರಬಾರದು ಎಂಬ ಕಾರಣಕ್ಕೆ ರಥವನ್ನು ರದ್ದು ಪಡಿಸಿದ್ದಾರೆ ಎಂದರು.
ಈ ವಿಚಾರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಾನೂನು ವ್ಯಾಪ್ತಿಯಲ್ಲಿ ಆಗಸ್ಟ್ 18 ಕ್ಕೆ ರಥೋತ್ಸವವನ್ನು ನಡೆಸುವ ಬಗ್ಗೆ ಪ್ರಸ್ಥಾಪಿಸಿದರು. ರಥೋತ್ಸವಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯರ ಒಳಿತಿಗಾಗಿ ನಡೆಯುತ್ತವೆ. ಇದಕ್ಕೆ ಯಾರು ಅಡ್ಡಿಯಾಗದೆ ಉಭಯ ಗ್ರಾಮಸ್ಥರು ಒಟ್ಟುಗೂಡಿ ರಾಜಿಯಾದ್ರೆ ಉಭಯ ಗ್ರಾಮಸ್ಥರ ಸಹಕಾರದಿಂದ ಈ ಬಾರಿ ಶ್ರೀ ಸ್ವಾಮಿಯ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.
ಈ ವೇಳೆ ಡಾ.ಬಿ.ಸಿ ಮೂಗಪ್ಪ, ಎಂ.ಎಂ.ಜೆ ಮೂಗಣ್ಣ, ರಾಂಪುರ ಗ್ರಾಮಸ್ಥರಾದ ಭರಮಜ್ಜ, ಬಸವನಗೌಡ ವಕೀಲರು, ಮದ್ದಾನಪ್ಪ ವಕೀಲರು, ನಾಗಭೂಷಣ ಸೇರಿದಂತೆ ಇತರರು ಇದ್ದರು. ಚಿರಿಬಿ ಗ್ರಾಮದ ಮುಖಂಡ ವೀರಯ್ಯ, ತಾ.ಪಂ ಸದಸ್ಯ ಗಂಗಾಧರ, ಗ್ರಾ.ಪಂ ಸದಸ್ಯ ಪಿ.ನಾಗರಾಜ್, ಅಂಗಡಿ ಮಂಜುನಾಥ ವಕೀಲರು ಸೇರಿದಂತೆ ಇತರರು ಹಾಗೂ ತಹಶಿಲ್ದಾರ್ ಅಮರೇಶ್ ಜಿ.ಕೆ, ತಾ.ಪಂ ಇ.ಒ ಡಾ.ಬಿ ಆನಂದ ಕುಮಾರ್, ಕೊಟ್ಟೂರು ಠಾಣೆ ಸಿ.ಪಿ.ಐ ವೆಂಕಟಸ್ವಾಮಿ, ಪಿ.ಎಸ್.ಐ ಗೀತಾಂಜಲಿ ಸಿಂಧೆ ಇನ್ನು ಮುಂತಾದವರು ಇದ್ದರು.