
ಬ್ರಹ್ಮ ಮುಹೂರ್ತದಲ್ಲಿ ನಿಮಗೂ ಇಂತಹ ಕನಸುಗಳು ಬಿದ್ದಿದ್ದರೆ ಧನಾಗಮನ ಖಂಡಿತ. ಬ್ರಹ್ಮ ಮುಹೂರ್ತವನ್ನು ದೇವರು ಮತ್ತು ದೇವತೆಗಳ ಸಮಯವೆನ್ನುವ ನಂಬಿಕೆಯಿದೆ. ಈ ಸಮಯದಲ್ಲಿ ದೇವಾನುದೇವತೆಗಳು ಭೂಲೋಕದಲ್ಲಿ ಸಂಚಾರವನ್ನು ಮಾಡುತ್ತಾರೆ. ಮುಂಜಾನೆ 4 ಗಂಟೆಯಿಂದ ಸೂರ್ಯೋದಯಕ್ಕೂ ಮೊದಲ ಸಮಯವನ್ನು ಬ್ರಹ್ಮ ಮುಹೂರ್ತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಾಡಿದ ಶುಭ ಕಾರ್ಯಗಳು ಶುಭ ಫಲಗಳನ್ನು ನೀಡುವಂತೆ ಈ ಸಮಯದಲ್ಲಿ ಬೀಳುವ ಕನಸುಗಳು ಕೂಡ ಶುಭವೆಂದು, ಭವಿಷ್ಯದಲ್ಲಿ ನಿಜವಾಗುತ್ತದೆ ಎಂದು ಹೇಳಲಾಗುತ್ತದೆ. ಬ್ರಹ್ಮ ಮುಹೂರ್ತದ ಸಮಯದಲ್ಲಿ ನೀವು ಈ ಕನಸುಗಳನ್ನು ನೋಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೇ ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂಬುದಾಗಿದೆ. ಬ್ರಹ್ಮ ಮುಹೂರ್ತದಲ್ಲಿ ನಾವು ನೋಡುವ ಯಾವೆಲ್ಲಾ ಕನಸುಗಳು ಲಕ್ಷ್ಮಿದೇವಿಯ ಆಹ್ವಾನದ ಸೂಚನೆಯನ್ನು ನೀಡುತ್ತದೆ. ಇಂತಹ ಕನಸುಗಳು ನಿಮಗೂ ಬಿದ್ದಿವೆಯೇ ನೋಡಿ..

- ಹಲ್ಲು ಬೀಳುವ ಕನಸು:
ಬ್ರಹ್ಮ ಮುಹೂರ್ತದ ಸಮಯದಲ್ಲಿ ಒಬ್ಬ ವ್ಯಕ್ತಿಯು ತನ್ನ ಹಲ್ಲು ಮುರಿದಂತೆ ಅಥವಾ ಬಿದ್ದು ಹೋದಂತೆ ಕನಸನ್ನು ನೋಡಿದರೆ ಅದನ್ನು ಅತ್ಯಂತ ಶುಭ ಕನಸು ಎಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸು ಬಿದ್ದರೆ ವ್ಯಕ್ತಿಯ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುವುದು ಎಂಬುದಾಗಿದೆ. ಈ ಕನಸು ವ್ಯಕ್ತಿಯ ಜೀವನಕ್ಕೆ ತುಂಬಾನೇ ಫಲಪ್ರದವಾಗಿರುತ್ತದೆ. ಆ ವ್ಯಕ್ತಿಯು ತನ್ನ ಮುಂದಿನ ವ್ಯಾಪಾರ, ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾನೆ.
ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿಮಗೆ ಈ ಕನಸುಗಳು ಬಿದ್ದರೆ ಅದು ಧನ ಲಾಭದ ಸೂಚನೆಯಾಗಿದೆ. ಇಂತಹ ಕನಸನ್ನು ನೋಡುವವರಿಗೆ ಮಹಾಲಕ್ಷ್ಮಿ ದೇವಿಯು ಒಲಿಯುತ್ತಾಳೆ ಎಂಬುದಾಗಿದೆ. ಇದು ನಿಮ್ಮ ಭವಿಷ್ಯಕ್ಕೆ ಅದೃಷ್ಟವನ್ನು ತರುವ ಸೂಚನೆಯಾಗಿದೆ. - ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು:
ಬ್ರಹ್ಮ ಮುಹೂರ್ತದ ಸಮಯದಲ್ಲಿ ಸ್ನಾನ ಮಾಡುತ್ತಿರುವಂತೆ ಅದರಲ್ಲೂ ವಿಶೇಷವಾಗಿ ನೀವು ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸನ್ನು ನೋಡಿದರೆ ಅಂತಹ ಕನಸುಗಳನ್ನು ಶುಭ ಕನಸುಗಳೆಂದು ಪರಿಗಣಿಸಲಾಗುತ್ತದೆ. ನೀವು ಹಣಕಾಸಿನ ಲಾಭವನ್ನು ಪಡೆಯುವುದಕ್ಕೂ ಮುನ್ನ ಇಂತಹ ಕನಸನ್ನು ಕಾಣುತ್ತೀರಿ. ಒಂದು ವೇಳೆ ದೀರ್ಘಕಾಲ ಸಾಲದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂತಹ ಸಮಯದಲ್ಲಿ ಈ ಕನಸನ್ನು ನೋಡಿದರೆ ನಿಮ್ಮ ಸಾಲದ ಸಮಸ್ಯೆಯು ಶೀಘ್ರದಲ್ಲೇ ಪರಿಹಾರವಾಗುವುದು. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದು. ನೀವು ಹಣಕಾಸಿನ ಲಾಭವನ್ನು ಪಡೆಯುವಂತಹ ಸಮಯದಲ್ಲಿ ಈ ಕನಸನ್ನು ನೋಡುತ್ತೀರಿ.

3. ಕನಸಿನಲ್ಲಿ ಧಾನ್ಯವನ್ನು ನೋಡುವುದು:
ನೀವು ಬ್ರಹ್ಮ ಮುಹೂರ್ತದ ಸಮಯದಲ್ಲಿ ಈ ಕನಸನ್ನು ನೋಡಿದರೆ ಅದು ನಿಮ್ಮ ಹಠಾತ್ ಧನಾಗಮನದ ಸೂಚನೆಯನ್ನು ನೀಡುತ್ತದೆ. ಇದ್ದಕ್ಕಿದ್ದಂತೆ ಹಣದ ಲಾಭವನ್ನು ಪಡೆದುಕೊಳ್ಳುವವರು ಇಂತಹ ಕನಸುಗಳನ್ನು ನೋಡುತ್ತಾರೆ. ನೀವು ಕನಸಿನಲ್ಲಿ ಧಾನ್ಯಗಳನ್ನು ಸಂಗ್ರಹಿಸುತ್ತಿರುವುದನ್ನು ನೋಡಿದರೆ ನಿಮ್ಮ ಯಾವುದೋ ಒಂದು ದೊಡ್ಡ ಕೆಲಸ ಶೀಘ್ರದಲ್ಲೇ ಮುಗಿಯುವುದು ಎಂಬುದರ ಸೂಚನೆಯಾಗಿದೆ. ನೀವು ಯಾವುದೋ ಒಂದು ದೊಡ್ಡ ಕೆಲಸದಲ್ಲಿ ಸಿಲುಕಿಕೊಂಡಿದ್ದು, ದೀರ್ಘಕಾಲದಿಂದ ಆ ಕೆಲಸ ಪೂರ್ಣಗೊಳ್ಳಲಿ ಎಂದು ನೀವು ಚಿಂತಿಸುತ್ತಿದ್ದರೆ ಅಂತಹ ಸಮಯದಲ್ಲಿ ನಿಮಗೆ ಈ ಕನಸು ಬಿದ್ದರೆ ಆ ದೊಡ್ಡ ಕೆಲಸ ಸದ್ಯದಲ್ಲೇ ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವುದು ಎಂಬುದಾಗಿದೆ.