
: ಇಲ್ಲಿನ ರಾಮನಗರದಲ್ಲಿರುವ ಧರ್ಮನಾಥ ಭವನದ ಬಳಿಯ ವಿದ್ಯಾರ್ಥಿಗಳ ಖಾಸಗಿ ಹಾಸ್ಟೆಲ್ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ರಾಯಬಾಗ ತಾಲ್ಲೂಕಿನಲ್ಲಿ ಭಾವನಸೌಂದತ್ತಿ ಗ್ರಾಮದ ನಿವಾಸಿ ಪ್ರಜ್ವಲ್ ಕುಪ್ಪಾನಟ್ಟಿ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಕಾಲೇಜಿಗೆ ತೆರಳದೇ ಹಾಸ್ಟೆಲ್ನಲ್ಲಿಯೇ ಇದ್ದ ಪ್ರಜ್ವಲ್. ಗೆಳೆಯರು ಮರಳಿ ಬಂದು ಕಿಟಕಿ ತೆಗೆದು ನೋಡಿದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಮಾಳಮಾರುತಿ ಠಾಣೆ ಪೊಲೀಸರು ತಿಳಿಸಿದ್ದಾರೆ.