ಧಾರವಾಡ; ನಗರದ ಪೆಪ್ಸೀ ಫ್ಯಾಕ್ಟರಿ ಬಳಿ ಇಂದು ಬೆಳಗಿನ ಜಾವ ಮುಂದಿನಿಂದ ಸಾಗುತ್ತಿದ್ದ ಲಾರಿಗೆ ಹಿಂಬದಿಯ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಚಾಲಕನಿಗೆ ಗಂಭೀರ ಗಾಯವಾಗಿದೆ.

ಎರಡೂ ಲಾರಿಗಳು ಧಾರವಾಡದಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಯಾಳು ಚಾಲಕನ ಹೆಸರು ಪೊಲೀಸ್ರ ಪರಿಶೀಲನೆ ಬಳಿಕವಷ್ಟೇ ತಿಳಿದು ಬರಬೇಕಾಗಿದೆ. ಇನ್ನೂ ದುರ್ಘಟನೆಗೆ ಪೆಪ್ಸಿ ಫ್ಯಾಕ್ಟರಿ ಬಳಿ ರಸ್ತೆಗೆ ಹಾಕಿರುವ ಸ್ಪೀಡ್ ಬ್ರೇ ಕರ್ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಇಲ್ಲಿ ಸ್ಪೀಡ್ ಬ್ರೇಕರನ್ನು ಹಾಕಲಾಗಿತ್ತು.
ಆದರೆ ಯಾವುದೇ ಸ್ಪೀಡ್ ಬ್ರೇಕರ ಸೈನ್ ಬೋರ್ಡ್ಗಳು ಇಲ್ಲದಿರುವುದರಿಂದ ಮುಂದಿನಿಂದ ಇದ್ದ ಲಾರಿ ಚಾಲಕನ ಗಮನಕ್ಕೆ ಬರಲಿಲ್ಲ. ಹತ್ತಿರ ಬಂದಾಗ ಗಮನಕ್ಕೆ ಬಂದ ಹಿನ್ನಲೆಯಲ್ಲಿ, ಮುಂದಿನ ಲಾರಿ ಚಾಲಕ ಏಕಾಏಕಿ ವೇಗ ನಿಯಂತ್ರಣ ಮಾಡಿದ್ದಾನೆ. ಇದರಿಂದಾಗಿ ಹಿಂಬದಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂದಿನ ಲಾರಿಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಹಿಂಬದಿ ಗಾಯಾಳು ಲಾರಿ ಚಾಲಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ಮುಂದುವರೆದಿದೆ.