
ಮಹಾಲಿಂಗಪುರ
ಬಾಗಲಕೋಟೆ: ಅಪಘಾತದಲ್ಲಿ ಈಚೆಗೆ ನಿಧನರಾದ ಪರಶುರಾಮ ಡೋಣಿ ಅವರ ಪತ್ನಿ ವಿದ್ಯಾಶ್ರೀ ಅವರಿಗೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಶಾಸಕ ಸಿದ್ದು ಸವದಿ ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ (ಪಿಎಂಎಸ್ಬಿವೈ) ವಿಮೆಯ 2 ಲಕ್ಷ ಮೊತ್ತದ ಚೆಕ್ ವಿತರಿಸಿದರು.

j3tvkannada
ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಬೆಟಗೇರಿ ಮಾತನಾಡಿ, ‘ಗ್ರಾಹಕರು ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ (ಪಿಎಂಎಸ್ಬಿವೈ) ಅಡಿ ವಾರ್ಷಿಕ20 ಪಾವತಿಸಿದರೆ, ಅಪಘಾತದಲ್ಲಿ ನಿಧನರಾದರೆ ಮೃತರ ವಾರಸುದಾರರಿಗೆ 2 ಲಕ್ಷ ಮೊತ್ತದ ಅಪಘಾತ ವಿಮೆ ದೊರೆಯಲಿದೆ’ ಎಂದರು.
ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಪಾಟೀಲ, ಮಹಾಲಿಂಗಪ್ಪ ಪೂಜಾರಿ, ಮಲ್ಲಿಕಾರ್ಜುನ ಕುಳೊಳ್ಳಿ, ವಿಷ್ಣುಗೌಡ ಪಾಟೀಲ, ಶಿವಪ್ಪ ನಾಗನೂರ, ಬಸವರಾಜ ಅರಳಿಕಟ್ಟಿ, ಈರಪ್ಪ ದಿನ್ನಿಮನಿ, ಶಿವಲಿಂಗಪ್ಪ ಘಂಟಿ, ಹಣಮಂತ ಬುರುಡ, ಸಂಗಪ್ಪ ಡೋಣಿ, ಅಶೋಕ ಪಾಟೀಲ್ ರವರು ಇದ್ದರು.