
ಉತ್ತರ ಕನ್ನಡ: ವೈಯಕ್ತಿಕ ನೆಲೆ ಬಿಟ್ಟು ದೇಶ ನನ್ನದು ಎಂದು ಹೋರಾಟಕ್ಕೆ ಇಳಿದಾಗ ಮಾತ್ರ ನಮ್ಮ ಉಳಿವು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ ಹೇಳಿದರು.

ದಾಂಡೇಲಿ ನಗರದ ಹಳೇ ನಗರಸಭೆಯ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಡಿ ಶನಿವಾರ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು. ಹಿಂದೂಗಳು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ. ನನ್ನ ಮೇಲೆ 117 ಕೇಸ್, 25 ಜಿಲ್ಲೆಗಳಿಂದ ಗಡಿಪಾರು ಆದೇಶ ಇದ್ದರೂ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ಮತಾಂತರ, ಹಲಾಲ್, ಭಯೋತ್ಪಾದನೆ ವಿರುದ್ಧ ಜೈಲಿಗೆ ಹೋಗಲು ಸಿದ್ಧರಾಗಿರಬೇಕು. ಕಾಶ್ಮೀರವನ್ನು ರಾಜಕೀಯ ನಾಯಕರ ಮೂರ್ಖತನದಿಂದ ಕಳೆದುಕೊಂಡಿದ್ದೇವೆ. ಇದನ್ನು ಮರಳಿ ಪಡೆಯಲು ಹಿಂದೂ ಹೋರಾಟಕ್ಕೆ ಸಿದ್ದರಾಗಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ರೂಪಿತವಾದ ಕಾನೂನಿಗೆ ಇಂದು ಅಂಕುಶ ಬಿದ್ದಿದೆ. ಈ ಭಾಗದ ಸ್ಥಳೀಯ ಶಾಸಕರು ತಮ್ಮ ಆಸ್ತಿ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಅದಕ್ಕೂ ವಕ್ಸ್ ಮುದ್ರೆ ಬಿದ್ದಿರಬಹುದು ನೋಡಿ’ ಎಂದು ವ್ಯಂಗ್ಯವಾಡಿದರು.