
ಯಾದಗಿರಿ: ಕುಡಿದ ಅಮಲಿನಲ್ಲಿ ಜಗಳ ಮಾಡಿದ ಯುವಕನೊಬ್ಬ ಹಿರಿಯ ನಾಗರಿಕರೊಬ್ಬರ ಮೇಲೆ ಪೆಟ್ರೋಲ್ ಎರಚಿ, ಬೆಂಕಿ ಹಚ್ಚಿದ ಘಟನೆ ಗುರುಮಠಕಲ್ ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ ನಡೆದಿದೆ.

j3tvkannada
ಪುಟಪಾಕ ಗ್ರಾಮದ ಬಾಬಾ ಹಾಜಿ ಮೌಲಾನ (30) ಎನ್ನುವ ಯುವಕ ಕುಡಿದ ಅಮಲಿನಲ್ಲಿ ಅದೇ ಗ್ರಾಮದ ನರಸಪ್ಪ ರಾಮಪ್ಪ ಊರಡಿ (50) ಅವರೊಂದಿಗೆ ಜಗಳ ಮಾಡಿದ್ದು, ನರಸಪ್ಪ ಅವರ ಮೈಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಗ್ರಾಮಸ್ಥರು ಕೂಡಲೇ ಬೆಂಕಿಯಿಂದ ಗಾಯಗೊಂಡ ನರಸಪ್ಪ ಅವರನ್ನು ನೆರೆಯ ತೆಲಂಗಾಣದ ನಾರಾಯಣಪೇಟ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು ಘಟನೆಯ ಕುರಿತು ಮಾಹಿತಿ ಕಲೆಹಾಕಿದ್ದಾರೆ.