
ಬಳ್ಳಾರಿ: ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ವಹಿಸಿಕೊಳ್ಳಲು ಸಿದ್ದ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಬಳ್ಳಾರಿಯ ವಿಜಯನಗರ ಸಂಸದ ಇ.ತುಕಾರಾಂ ಹೇಳಿದರು.

j3tvkannada
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವ ವಿಷಯದ ಕುರಿತು ಸೋಮವಾರ ಸುದ್ದಿಗಾರರಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮೊದಲಿನಿಂದಲೂ ಹೈಕಮಾಂಡ್ ಅಣತಿಯಂತೆ ನಡೆಯುತ್ತದೆ. ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎಂಬುದು ಸೇರಿ ಇತರೆ ವಿಷಯಗಳನ್ನು ಪಕ್ಷದ ಹಿರಿಯರು ಚರ್ಚಿಸಿ, ನಿರ್ಧರಿಸುತ್ತಾರೆ ಎಂದರು. ಶಾಸಕನಾಗಿದ್ದ ನನಗೆ ಲೋಕಸಭೆಗೆ ಸ್ಪರ್ಧಿಸಲು ಸೂಚಿಸಲಾಯಿತು. ಶಾಸಕನಾಗಿದ್ದುಕೊಂಡೇ ಸಂಸದನಾದೆ, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಹೊರುವೆ ಎಂದರು.