
ಹುಬ್ಬಳ್ಳಿ: ಸಮಾಜ ಸೇವಕರಾದ ಡಾ. ರಮೇಶ ಮಹಾದೇವಪ್ಪನವರ ಜನ್ಮದಿನದ ನಿಮಿತ್ತವಾಗಿ ರಮೇಶೋತ್ಸವ ಹಾಗೂ ಡಿ.ಎಲ್.ಆರ್.ಎಮ್ ಜೈ ಹನುಮಾನ್ ಫೌಂಡೇಶನ್ ಹುಬ್ಬಳ್ಳಿ ಉದ್ಘಾಟನಾ ಸಮಾರಂಭವು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿಂದು ಅದ್ದೂರಿಯಾಗಿ ಜರುಗಿತು. ಸೈನಿಕರು, ವಿಕಲಚೇತನರಿಗೆ, ಪೌರಕಾರ್ಮಿಕರಿಗೆ, ಪತ್ರಕರ್ತರಿಗೆ ಸನ್ಮಾನ, ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ, ಆರೋಗ್ಯ ತಪಾಸಣೆ, ರಕ್ತದಾನ, ನೇತ್ರ ತಪಾಸಣೆ, ವಿಕಲಚೇತನರಿಗೆ ಕೃತಕ ಕೈಕಾಲು ಜೋಡಣೆ ಕೋರಿಯರ್ ವಿತರಕರಿಗೆ ಜಾಕೆಟ್ ವಿತರಣೆ, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಕಿಟ್ ವಿತರಣೆ, ಸಸಿ ವಿತರಣಾ ಕಾರ್ಯಕ್ರಮವನ್ನು ಡಾ. ರಮೇಶ್ ಮಹದೇವಪ್ಪನವರ ನೆರವೇರಿಸಿದರು.

ಸಂಘಟನೆಗಳಿಂದ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ನಗರದ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು, ಅಣ್ಣಿಗೇರಿಯ ಖಾದರಸಾಬ ಸನದನೂ ಭಾಯ, ಶಾಂತಿನಗರದ ಪ್ರಾರ್ಥನಾ ಮಂದಿರದ ಫಾದರ್ ಡಾ. ಅಲ್ವಿನ್ ಸುಧೀರ್ ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಹುಧಾ ಮಹಾನಗರ ಪಾಲಿಕೆ ಸದಸ್ಯರುಗಳು, ಗೀತಾ ರಮೇಶ ಮಹಾದೇವಪ್ಪನವರ, ಮಹಾದೇವಪ್ಪನವರ ಸಹೋದರಿ ರೇಣುಕಾ ಮುಖಂಡರಾದ ಅಬ್ದುಲ್ ಗಲಿ ಅಹ್ಮದ್ ಸೇರಿದಂತೆ ಡಾ. ರಮೇಶ ಮಹಾದೇವಪ್ಪನವರ ಅಭಿಮಾನಿ ಬಳಗ ಮತ್ತು ಇನ್ನಿತರರು ಉಪಸ್ಥಿತರಿದ್ದರು.