
ವಿಜಯಪುರ: ದಿನಾಂಕ 7 ಶನಿವಾರದಂದು ಜಾಗತಿಕವಾಗಿ ಮುಸ್ಲಿಂ ಸಮೂದಾಯದಿಂದ ಆಚರಿಸಲಾಗುತ್ತದೆ ಬಕ್ರೀದ್ ಹಬ್ಬ. ಇದು ವಾರ್ಷಿಕ ಹಬ್ಬವಾಗಿದ್ದರೂ ತ್ಯಾಗದ ಹಬ್ಬವಾಗಿ ಪರಿಣಮಿಸಿದೆ ಈ ಹಬ್ಬವನ್ನು ಆಚರಿಸುವ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರಬೇಕೆಂದು ಸಿ.ಪಿ.ಐ ಮಹ್ಮದಪಶುಉದ್ದೀನ ಅವರು ನುಡಿದರು.

J3tvkannada
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬ ಕುರಿತು ಕರೆಯಲಾದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಉಪಸ್ಥಿತರಿದ್ದು, ಹಿಂದೂ-ಮುಸ್ಲಿಂ ಬಾಂಧವರಿಗೆ ತಿಳುವಳಿಕೆ ನೀಡುತ್ತಿದ್ದ ಅವರು ಶಾಂತಿ ಇದ್ದಲ್ಲಿ ಅಭಿವೃದ್ದಿಗೆ ಅವಕಾಶವಿದೆ. ನೀವೆಲ್ಲರೂ ಎಂದಿನಂತೆ ಸಹ ಬಾಳ್ವೆಯಿಂದ ಮುಂದುವರೆಯಬೇಕು ಎಂದರು. ತ್ಯಾಗದ ಹಬ್ಬವಾದ ಬಕ್ರೀದ್ ಹಬ್ಬ ಪ್ರವಾದಿ ಇಬ್ರಾಹಿಂ ಅವರ ಮಗನ ತ್ಯಾಗವನ್ನು ಸ್ಮರಿಸುತ್ತದೆ ಮತ್ತು ಪವಿತ್ರ ನಗರವಾದ ಮೆಕ್ಕಾಗೆ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ, ಇದನ್ನು ಅರಿತು ಮುಸ್ಲಿಂ ಬಾಂಧವರು ನಡೆಯಬೇಕು ಎಂದು ಹೇಳಿದರು. ಯಾವುದೇ ತರಹದ ಅಹಿತಕರ ಘಟನೆಗಳು ಜರುಗಬಾರದೆಂಬ ಉದ್ದೇಶದಿಂದ ಇಂದು ಶಾಂತಿ ಸಭೆಯನ್ನು ಕರೆಯಲಾಗಿದೆ, ಎಲ್ಲರೂ ಈ ಹಬ್ಬದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಹಬ್ಬ ಆಚರಣೆ ಕುರಿತು ತಾಳಿಕೋಟೆ ಪಟ್ಟಣದಲ್ಲಿ ಯಾವ ಯಾವ ಸ್ಥಳಗಳಲ್ಲಿ ನಮಾಜ್ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ ಎಂಬುದರ ಕುರಿತು ವಿವರಣೆ ಪಡೆದ ಅಧಿಕಾರಿಗಳು ಶಾಂತಿವಂತರಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನೆಮ್ಮದಿಯಿಂದ ಆಚರಣೆ ಮಾಡಿಕೊಳ್ಳಿ ಕಿಡಿ ಗೇಡಿತನಕ್ಕೆ ಅವಕಾಶ ನೀಡದೇ ಶಾಂತಿ ಕಾಪಾಡಲು ಮುಂದಾಗಿ ಎಂದ ಅವರು ಜನ ದಟ್ಟನೆಯಲ್ಲಿ ಮಾಸ್ಕನ್ನು ಧರಿಸಿಕೊಳ್ಳುವ ಕಾರ್ಯ ಮಾಡಿ ಎಂದು ಹೇಳಿದ್ದಲ್ಲದೆ, ಯಾವುದೇ ತರಹದ ಸಾಗಾಣಿಕೆಯಾಗಬಾರದೆಂಬ ಉದ್ದೇಶದಿಂದ ತಾಳಿಕೋಟೆ ಪಟ್ಟಣದ ಈ ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗುತ್ತಿದೆ. ಯಾವುದೇ ತರಹದ ಘಟನೆ ಜರುಗಿದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಕಾರಣ ಎಲ್ಲರೂ ಎಚ್ಚರದಿಂದ ತಮ್ಮ ತಮ್ಮ ಕಾರ್ಯಗಳನ್ನು ನಿಭಾಯಿಸಿಕೊಂಡು ನಡೆಯಬೇಕೆಂದರು.
ಇನ್ನೋರ್ವ ಸ್ಥಳೀಯ ಪೊಲೀಸ್ ಠಾಣಾ ಪಿ.ಎಸ್.ಐ ರಾಮನಗೌಡ ಸಂಕನಾಳ ಅವರು ಮಾತನಾಡಿ, ಮುಸ್ಲಿಂ ಸಮುದಾಯದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ. ಈ ಪಟ್ಟಣದಲ್ಲಿಯ ಕಳೆದ 3 ವರ್ಷಗಳಿಂದಲೂ ಹಬ್ಬಗಳ ಆಚರಣೆಯನ್ನು ನಾನು ನೋಡಿದ್ದೇನೆ, ಈ ಹಿಂದಿನಂತೆಯೇ ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ಎಲ್ಲರೊಂದಿಗೆ ಪ್ರೀತಿ ಪ್ರೆಮದೊಂದಿಗೆ ಬೆರೆತು ಹಬ್ಬಗಳನ್ನು ಆಚರಿಸಿಕೊಂಡು ಬರಬೇಕು. ಈಗಾಗಲೇ ಈ ಕುರಿತು ಕೆಲವೆಡೆ ಪೊಲೀಸ್ ಪಾಯಿಂಟ್ಗಳನ್ನು ಹಾಕಲಾಗಿದೆ. ಎಲ್ಲಾ ಕೋಮಿನವರು ಈ ಹಬ್ಬದಲ್ಲಿ ಪಾಲ್ಗೊಂಡು ಎಂದಿನಂತೆ ಸೌಹಾರ್ದತಾ ಭಾವನೆಯೊಂದಿಗೆ ಸಾಗಬೇಕು ಎಂದರು.
ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ, ಹಬ್ಬಗಳಲ್ಲಿ ಮುನ್ನೆಚ್ಚರಿಕೆ ಕುರಿತು ಎಂದಿನಂತೆ ಇಂದು ಶಾಂತಿ ಸಭೆ ಕರೆಯಲಾಗಿದೆ. ಬಕ್ರೀದ್ ಹಬ್ಬ ಕುರಿತು ಕರೆದಂತಹ ಈ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡುವಂತವರಾಗಿದ್ದೇವೆ, ಎಲ್ಲರೂ ಸೌಹಾರ್ದತೆ ಭಾವನೆಯಿಂದ ಸಹೋದರ ಭಾವನೆಯನ್ನು ಎಂದಿನಂತೆ ಮೂಡಿಸಿಕೊಳ್ಳುತ್ತಾ ಸಾಗುತ್ತೇವೆ ಎಂದರು.
ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ, ಇಮಾಮಸಾಬ ಕಾಳಗಿ, ಜಾವೇದ ಕೇಂಭಾವಿ, ಪೀರಮಹ್ಮದ ಖಾಜಿ ಅವರು ಮಾತನಾಡಿ, ತಾಳಿಕೋಟೆ ಪಟ್ಟಣದ ಅಂಜುಮನ್ ಈದ್ಗಾದಲ್ಲಿ, ಮಿಲತ್ನಗರ ಮೈಧಾನದಲ್ಲಿ ಪ್ರಾರ್ಥನಾ ಕಾರ್ಯವು ನಡೆದು ಬಕ್ರೀದ್ ಹಬ್ಬದ ಆಚರಣೆ ಕುರಿತು ಈ ಹಿಂದಿನಿಂದ ಸಾಗಿ ಬಂದಂತಹ ವಿವರಣೆಯನ್ನೂ ಸಹ ಈ ಸಮಯದಲ್ಲಿ ನೀಡಿ ಹಬ್ಬದ ಆಚರಣೆಯ ಕುರಿತು ತಿಳಿಸಲಾಗುತ್ತದೆ ಎಂದರು. ಈ ಸಮಯದಲ್ಲಿ ಮೋದಿನಸಾಬ ನಗಾರ್ಚಿ, ಶಪೀಕ್ ಇನಾಮದಾರ, ಇಮಾಮಸಾಬ ಕಾಳಗಿ, ಶಶಿಧರ ಡಿಸಲೆ, ಮೈಹಿಬೂಬ ಕೇಂಭಾವಿ, ಅಬುಬಕರ ಲಾಹೋರಿ, ನಬಿ ಲಾಹೋರಿ, ನಿಸಾರ ಬೇಪಾರಿ, ಹುಸೇನಬಾಷಾ ಜಮಾದಾರ, ಬಸವರಾಜ ಬಿರಾದಾರ, ಎಂ.ಎಂ.ಬೇಪಾರಿ, ಎನ್.ಆಯ್.ಕಡು, ಜೆ.ಎಂ.ಕೇಂಭಾವಿ, ಜೆ.ಎನ್.ಬಿಳವಾರ, ಐ.ಎಲ್.ಡಿಗ್ಗಿ, ಬಸ್ಸು ಮಾದರ, ಮೊದಲಾದವರು ಉಪಸ್ಥಿತರಿದ್ದರು.