
ಯಾದಗಿರಿ: ಕೂಡಲೂರು ಗ್ರಾಮದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ಶ್ರೀ ಬಾಲಾಜಿ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಸಭೆ ನಡೆದಿದ್ದು, ಈ ಸಭೆಯಲ್ಲಿ ಹಲವಾರು ಗಣ್ಯರು ಭಾಗವಹಿಸಿ ಮಾತನಾಡಿದರು. ಶಿಬಿರಾರ್ಥಿಗಳು ಕಳೆದ ಏಳು ದಿನಗಳಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ರೂಪಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ನೈಜ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಗೆ ಸಾಮಾಜಿಕ ಕಳಕಳಿ ಮೂಡಿಸುತ್ತದೆ ಎಂದು ಕಡೇಚೂರು ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿಕ್ಷಣ ಪ್ರೇಮಿ ಮಹಾದೇವಪ್ಪ ದದ್ದಲ್ ಅವರು ಅಭಿಪ್ರಾಯಪಟ್ಟರು.

ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಕಿಶನ್ ರಾಠೋಡ್ ಮಾತನಾಡಿ, ಗ್ರಾಮ ಸ್ವಚ್ಛತೆ ಮಾಡಿ, ಪರಿಸರ ಸ್ನೇಹಿ ಅಭಿಯಾನಗಳನ್ನು ಹಮ್ಮಿಕೊಂಡು, ಹಿರಿಯ ನಾಗರಿಕರೊಂದಿಗೆ ಮಾತನಾಡಿ ಅವರ ಅನುಭವಗಳನ್ನು ಅರಿತುಕೊಂಡು, ಊರಿನವರಿಗೆ ಶಿಕ್ಷಣದ ಮಹತ್ವ ತಿಳಿಸಿ ಜಾಗೃತಿ ಮೂಡಿಸಿದ್ದು ಇವೆಲ್ಲವುಗಳು ಕೇವಲ ಚಟುವಟಿಕೆಗಳು ಅಲ್ಲ, ಇವು ನಮ್ಮ ಬದುಕಿನ ಮಾರ್ಗದರ್ಶಕ ತತ್ವಗಳನ್ನು ಬೋಧಿಸಿದ್ದೇವೆ ಎಂದರೆ ತಪ್ಪಾಗಲ್ಲ ಎಂದರು. ಉಪನ್ಯಾಸಕರಾದ ಶ್ವೇತಾ ರಾಘವೇಂದ್ರ ಪೂರಿ, ಮೀನಾಕ್ಷಿ, ಬನ್ನಪ್ಪ, ಮಂಜುನಾಥ, ಹೊನ್ನಪ್ಪ, ಅಭಿಲಾಶ್, ಅನುಶ್ರೀ ಸೇರಿದಂತೆ ಶಿಬಿರಾರ್ಥಿಗಳಿದ್ದರು. ಮಂಜುಳಾ ಚೌವ್ಹಾಣ ಸ್ವಾಗತಿಸಿದರು, ದೇವಪ್ಪ ನಿರೂಪಿಸಿದರು ಲತಾ ಅವರು ವಂದಿಸಿದರು.