
ಮಂಡ್ಯ: ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಬೃಂದಾವನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಉದ್ದೇಶದಿಂದ 92.3 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಹಾಗೂ ಲೇಸರ್ ಶೋ ನಡೆಸಲು ರಾಜ್ಯ ಸರಕಾರ ತೀರ್ಮಾನ ಮಾಡಿದ್ದು, ಕಾಮಗಾರಿಗೆ ಕ್ಷಣಗಣನೆ ಆರಂಭವಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಬೃಂದಾವನದ ದೋಣಿ ವಿಹಾರ ಸಮೀಪದ ಪ್ರದೇಶದಲ್ಲಿ ಕಾವೇರಿ ನದಿಗೆ ಸೋರಿಕೆ ನೀರು ಹರಿಬಿಡುವ ಸ್ಥಳದ ಮಧ್ಯಭಾಗದಲ್ಲಿ ‘ಕಾವೇರಿ ಆರತಿ’ ನಡೆಸಲು ಯೋಜನೆ ಕೈಗೊಳ್ಳಲಾಗಿದೆ. ಧಾರ್ಮಿಕ ಹಾಗೂ ಸಂಸ್ಕೃತಿಗೆ ಪೂರಕವಾಗಿ ಕಾರ್ಯಕ್ರಮವನ್ನು ಜಲಸಂಪನ್ಮೂಲ, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

j3tvkannada
ಕಾವೇರಿ ಆರತಿಗಾಗಿ 45+45 ಮೀಟರ್ ಅಳತೆಯ ಪ್ಲಾಟ್ಫಾರಂ ನಿರ್ಮಾಣ, ಎರಡು ಕಡೆ ಏಕ ಕಾಲಕ್ಕೆ 8000 ಮಂದಿ ಕುಳಿತು ಕಾವೇರಿ ಆರತಿ ವೀಕ್ಷಣೆ ಮಾಡಲು ಆಸನಗಳನ್ನು 175+175 ಮೀಟರ್ ಅಳತೆಯಲ್ಲಿ ಪ್ರತ್ಯೇಕ ಪ್ಲಾಟ್ಫಾರಂ ನಿರ್ಮಾಣ ಮಾಡುವ ಗುರಿಯೊಂದಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕಾವೇರಿ ಆರತಿಗೆ ಜನಾಕರ್ಷಣೆ ಮಾಡುವ ಉದ್ದೇಶದಿಂದ ಲೈಟಿಂಗ್ಸ್, ಸೌಂಡ್ಸ್, ಎಲ್ಇಡಿ ಸ್ಕ್ರೀನ್ ಹಾಗೂ ಮ್ಯೂಜಿಕಲ್ ಫೌಂಟೇನ್ ನಿರ್ಮಾಣ ಮಾಡುವ ಕಾಮಗಾರಿಯೂ ಈ ಉದ್ದೇಶಿತ ಯೋಜನೆಯಲ್ಲಿಸೇರ್ಪಡೆ ಮಾಡಲಾಗಿದೆ.
ಬೃಂದಾವನಕ್ಕೆ ಆಗಮಿಸುವ ಪ್ರವಾಸಿಗರು ಬೃಂದಾವನದ ಸೊಬಗು, ಚಿತ್ತಾಕರ್ಷಕ ಬೆಳಕಿನೊಂದಿಗೆ ಕಣ್ಮನ ಸೆಳೆಯುವ ಬಣ್ಣ, ಬಣ್ಣದ ಬೆಳಕಿನ ವಿದ್ಯುತ್ ದೀಪಗಳು, ಸಂಗೀತ ನೃತ್ಯ ಕಾರಂಜಿಯನ್ನು ಕಣ್ತುಂಬಿ ಕೊಳ್ಳುತ್ತಿದ್ದರು. ಇದೀಗ ಕಾವೇರಿ ಆರತಿ ಜತೆಗೆ ಸಂಗೀತ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು. ಕಾವೇರಿ ಆರತಿ ಕಾಮಗಾರಿಯ ನೀಲನಕ್ಷೆಯನ್ನು ಈಗಾಗಲೇ ತಯಾರಿಸಿದ್ದು, ಕಾಮಗಾರಿ ನಡೆಸುವ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಬಿಡಬ್ಲೂತ್ರ್ಯ ಎಸ್.ಎಸ್.ಬಿ ಚೇರ್ಮನ್ ರಾಮ್ಪ್ರಸಾದ್, ಕಾವೇರಿ ನೀರಾವರಿ ನಿಗಮ, ಕಂದಾಯ ಇಲಾಖೆ, ಸೆಸ್ಕ್, ಮುಜರಾಯಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಈಗಾಗಲೇ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೇಟಿ ನೀಡಿ ವಿಸ್ತೃತ ಚರ್ಚೆ ನಡೆಸಿದ್ದಾರೆ.

j3tvkannada
ಕಾಮಗಾರಿ ಅಂತಿಮಗೊಳಿಸುವ ಮುನ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ವರದಿ ಸಲ್ಲಿಸಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅಂತಿಮಗೊಳಿಸಲಾಗಿದೆ. ದಸರಾ ಜತೆಗೆ ಈ ಕಾರ್ಯಕ್ರಮ ಮಾಡಬೇಕು ಎಂಬುದು ನಮ್ಮ ಇಚ್ಛೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾವು ತುಂಗಾ ಆರತಿ, ಕಾವೇರಿ ಆರತಿ ಮಾಡಿದ್ದೇವೆ. ನಮ್ಮ ರಾಜ್ಯದ ತಂಡದವರೇ ಈ ಕಾರ್ಯಕ್ರಮ ಮಾಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸ್ಥಳೀಯ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಯೋಜನಾ ಪ್ರಾಧಿಕಾರ ರಚನೆ, ಆಸನ ವ್ಯವಸ್ಥೆ, ಸ್ಥಳಾವಕಾಶ, ಮಳೆಯಿಂದ ರಕ್ಷಣಾ ವ್ಯವಸ್ಥೆ, ಕಲಾವಿದರು, ಪೂಜೆ ನೆರವೇರಿಸುವರಿಗೆ ಸ್ಥಳಾವಕಾಶ ಸೇರಿದಂತೆ ಸಮಗ್ರ ನೀಲನಕ್ಷೆ ರೂಪಿಸಲಾಗಿದೆ.
ಕಾವೇರಿ ನಿಗಮದಲ್ಲಿ ಈ ಕಾರ್ಯಕ್ರಮಕ್ಕೆ 60 ಕೋಟಿ ರೂ. ಮೀಸಲಿಟ್ಟಿದ್ದು, ಸಚಿವ ಸಂಪುಟ ಸಭೆಯಲ್ಲಿ92 ಕೋಟಿ ರೂ.ಗೆ ಅನುಮೋದನೆ ಕೂಡ ದೊರೆತ್ತಿದೆ. ಕಾವೇರಿ ಆರತಿ ವೇದಿಕೆ ನಾಲ್ಕು ದಿಕ್ಕಿನಲ್ಲೂ ಕಾಣುವಂತಿರಬೇಕು. ಶುಲ್ಕ ಪಾವತಿ ಹಾಗೂ ಉಚಿತವಾಗಿ ಕಾರ್ಯಕ್ರಮ ವಿಕ್ಷಣೆಗೆ ಅವಕಾಶ ಕಲ್ಪಿಸಬೇಕಿದೆ. ವೇದಿಕೆಯನ್ನು ಅಣೆಕಟ್ಟಿನಿಂದ ಸ್ವಲ್ಪ ದೂರದಲ್ಲಿ ಸದಾ ನೀರು ಇರುವಂತಹ ಜಾಗದಲ್ಲಿ ಮಾಡಲಾಗುತ್ತಿದೆ. ಮುಂಬರುವ ದಸರಾ ವೇಳೆಗೆ ‘ಕಾವೇರಿ ಆರತಿ’ ಪ್ರಾರಂಭಿಸಲಾಗುವುದು. ಇದಕ್ಕೆ ಉಚಿತ ಪ್ರವೇಶ ಇರಲಿದ್ದು ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೆ.ಆರ್.ಎಸ್ ಬೃಂದಾವನದಲ್ಲಿ ನಿರ್ಮಾಣ ಮಾಡುತ್ತಿರುವ ಕಾವೇರಿ ಆರತಿ ಕಾಮಗಾರಿಯನ್ನು ಡಿವೈ ಉಪ್ಪಾರ್ ಆ್ಯಂಡ್ ಸನ್ಸ್ ಕಂಪನಿಗೆ ಟೆಂಡರ್ ನೀಡಲಾಗಿದೆ. 4 ತಿಂಗಳಲ್ಲಿಕಾಮಗಾರಿ ಮುಗಿಯಲಿದೆ.