
ಧಾರವಾಡ: ನವಲಗುಂದ ಸ್ಥಳಾಂತರಗೊಂಡ ಗ್ರಾಮಗಳಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಗಳ ತಂಡ ರಚಿಸಿ ವರದಿ ಪಡೆದು ಮನೆ ಇಲ್ಲದ ಬಡವರಿಗೆ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಶಾಸಕ ಎನ್. ಎಚ್.ಕೋನರಡ್ಡಿ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ತಾಲ್ಲೂಕಿನ ಗುಡಿಸಾಗರ, ಅರಟ್ಟಿ, ಕೊಂಗವಾಡ, ಆಯಟ್ಟಿ, ಬಸಾಪೂರ ಹಾಗೂ ಅಮರಗೋಳ ಸ್ಥಳಾಂತರಗೊಂಡ ಗ್ರಾಮಗಳಲ್ಲಿ ಈಗಾಗಲೇ ಹಕ್ಕು ಪತ್ರ ವಿತರಿಸಲಾಗಿದ್ದರೂ ಅವುಗಳಿಗೆ ಕೆಜಿಪಿ, ಕಂದಾಯ ನಕಾಶ, ಇಲ್ಲದೆ ಇರುವುದರಿಂದ ಎಲ್ಲ ಫಲಾನುಭವಿಗಳಿಗೆ ಹೆಸರುಗಳನ್ನು ದಾಖಲಿಸಲು ತೊಂದರೆಯಾಗಿದೆ’ ಎಂದರು. ತಹಶೀಲ್ದಾರ್ ಸುಧೀರ್ ಸಾಹುಕಾರ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಭಾಗ್ಯಶ್ರೀ ಜಹಾಗೀರದಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡರಚನೆ ಮಾಡಿ ಸ್ಥಳೀಯರೊಂದಿಗೆ ಚರ್ಚಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚಿಸಿದರು. ನಂತರ ತಡಹಾಳ ಗ್ರಾಮಕ್ಕೆ ತರಳಿ ಎಸ್ಸಿಪಿ ಯೋಜನೆಯಲ್ಲಿ ಬಸ್ ನಿಲ್ದಾಣದಿಂದ ನವಲುಗುಂದ ರಸ್ತೆವರೆಗೆ 30 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.