
ಉತ್ತರಕನ್ನಡ: ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿದ ಶವಾಗಾರ ಉದ್ಘಾಟನೆ ಆಶಾಕಿರಣ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಕನ್ನಡಕ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ನೂತನವಾಗಿ 35 ಲಕ್ಷ ವೆಚ್ಚದಿಂದ ನಿರ್ಮಿಸಲಾದ ಶವಾಗಾರ ಕಟ್ಟಡ ಲೋಕಾರ್ಪಣೆ ಹಾಗೂ ಆಶಾಕಿರಣ ಯೋಜನೆ ಅಡಿ ಸರಬರಾಜು ಆಗಿರುವ ಉಚಿತ ಕನ್ನಡಕಗಳ ವಿತರಣೆ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿ ವಿಕಲ ಚೇತನರಿಗೆ ಇಂಧನ ಚಾಲಿತ ದ್ವಿಚಕ್ರ ವಾಹನ ವಿತರಣೆ ಮತ್ತು 2024ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಆರ್.ವಿ.ದೇಶಪಾಂಡೆ ರವರು ಉಪಸ್ಥಿತರಿದ್ದು ಮಾತನಾಡಿದರು. ದೃಷ್ಟಿ ದೋಷ ಇದ್ದವರಿಗೆ ಈಗಾಗಲೇ ಕನ್ನಡಕವನ್ನು ವಿತರಿಸಲಾಗಿದೆ. ದೃಷ್ಟಿ ದೋಷದ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಕಣ್ಣಿನ ತಜ್ಞ ವೈದ್ಯರನ್ನು ಸಂಪರ್ಕಿಸಿರಿ ಎಂದರು.