

ಧಾರವಾಡ: ವಿದ್ಯಾಕಾಶಿ, ಶಿಕ್ಷಣಕಾಶಿ, ಪೇಡಾ ನಗರಿ ಎಂದೇ ಕರೆಸಿಕೊಳ್ಳುವ ಧಾರವಾಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಓಡಾಡಿದ ನೆಲ. ವಿಶ್ವ ಕಂಡ ಶ್ರೇಷ್ಠ ಕನ್ನಡ ಕವಿ ದ.ರಾ ಬೇಂದ್ರೆ ಅವರ ಹೆಸರಿನಲ್ಲಿ ಇಲ್ಲಿ ವರ್ಷ ಪೂರ್ತಿ ಸಾಕಷ್ಟು ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ. ಆದರೆ, ಎಲ್ಲಾ ಕಾರ್ಯಕ್ರಮಗಳಿಗೆ ಆಧಾರವಾಗಿರುವ ಬೇಂದ್ರೆ ಭವನದ (Bendre Bhavana) ಕಟ್ಟಡ ದುರಸ್ತಿಯಾಗಿದರೂ, ಸರಿಯಾದ ನಿರ್ವಹಣೆ ಇಲ್ಲದೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಧಾರವಾಡ ಅಂದ್ರೆ ಸಾಧನಕೇರಿ ಹೆಸರು ಎಲ್ಲರ ಬಾಯಲಿ ಚಡಪಡಿಸುತ್ತದೆ. ಸ್ವತಃ ಬೇಂದ್ರೆ ಅವರೇ ಅವರು ಬಾರೋ ಸಾಧನಕೇರೆಗೆ ಎಂದು ತಮ್ಮ ಕಾವ್ಯದ ಮೂಲಕ ಸಾಹಿತ್ಯಾಸಕ್ತರನ್ನು ಬರಮಾಡಿಕೊಂಡಿದ್ದಾರೆ. ಆದರೆ ಸಾಧನಕೇರೆಯಲ್ಲಿರುವ ಅವರ ಮನೆ ಹಾಗೂ ಅದರ ಪಕ್ಕದಲ್ಲಿರುವ ಬೇಂದ್ರೆ ಭವನ ಸಾಹಿತ್ಯಾಸಕ್ತರಿಗೆ ಬೇಸರ ಉಂಟು ಮಾಡಿದೆ.