
ಕೋಲಾರ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ರವರು, ನಿಜಾರ್ಥದಲ್ಲಿ ಹುಚ್ಚ ವೆಂಕಟ್, ಅವರಿವರನ್ನು ನಿಮ್ಹಾನ್ಸ್ ಗೆ ಸೇರಿಸುವ ಬದಲು, ಕುದ್ದಾಗಿ ಪ್ರದೀಶ್ ಈಶ್ವರ್ ದಾಖಲಾಗುವುದೇ ಒಳಿತು ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ.

J3tvkannada.in
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯನವರ ಜಯಂತೋತ್ಸವ, ಕಾರ್ಯಕ್ರಮದಲ್ಲಿ ಈಶ್ವರ್ ಬಳಸಿದ ಭಾಷೆ ಮತ್ತು ಮಾತು ಖಂಡನೀಯ, ಚಿಕ್ಕಬಳ್ಳಾಪುರದ ಜನತೆ ಯಾಕಾದರೂ ಇವರನ್ನು ಅರಿಸಿ ವಿಧಾನ ಸಭೆಗೆ ಕಳಿಸಿದೆವೋ ಅಂತ ಪರಿತಪಿಸುತ್ತಿರಬಹುದು,ಯಾರನ್ನೋ ಮೆಚ್ಚಿಸುವ ಭರದಲ್ಲಿ ಅವರು ಮನಬಂದಂತೆ ಮಾತಾಡುತ್ತಾರೆ, ಎಂದು ಮುನಿಸ್ವಾಮಿ ಹೇಳಿದ್ದಾರೆ. ಬಲಿಜ ಸಮುದಾಯಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಾಕಷ್ಟು ಮಾಡಿದ್ದಾರೆ ಎಂದು ಅವರು ಹೇಳಿದರು.