
ದಕ್ಷಿಣ ಕನ್ನಡ(ಮಂಗಳೂರು): ಉಸ್ತುವಾರಿ ಬದಲಾವಣೆ ಮಾಡಿ ಎಂದು ನಾನು ಕೇಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರಿಗೆ ನಿನ್ನೆ ಮೊನ್ನೆ ಎಲ್ಲಾ ಭೇಟಿ ಕೊಟ್ಟು ಸಾಕಷ್ಟು ಕಾನೂನಿನ ಕ್ರಮ ಕೈಗೊಂಡಿದ್ದೇವೆ. ಅನೇಕ ಬದಲಾವಣೆ ಮಾಡಿದ್ದೇವೆ. ಕಾನೂನು ಕ್ರಮ ಚುರುಕಿಗೆ ಗೃಹ ಸಚಿವರು ಸೂಚಿಸಿದ್ದಾರೆ.

j3tvkannada
ಉಸ್ತುವಾರಿ ಬದಲಾವಣೆ ಮಾಡಿ ಎಂದು ಹೇಳಿಲ್ಲ ಅವೆಲ್ಲ ಸುಮ್ಮನೆ. ಅದು ಎಲ್ಲಿಂದ ಬಂತೋ ಗೊತ್ತಿಲ್ಲ, ಯಾರು ಹೇಳಿದ್ದು ಗೊತ್ತಿಲ್ಲ. ಜವಾಬ್ದಾರಿ ಇದ್ದಾಗ ಒಂದೊಂದು ಸಂದರ್ಭದಲ್ಲಿ ಎಲ್ಲಾ ಎದುರಿಸಬೇಕಾಗುತ್ತದೆ. ನಾನು ಅಷ್ಟೇ ಉತ್ಸಾಹದಲ್ಲಿದ್ದೇನೆ. ನನ್ನ ಉಸ್ತುವಾರಿ ಭೇಟಿ ಬಗ್ಗೆ ಎಲ್ಲರಿಗೂ ಗಮನದಲ್ಲಿ ಇದೆ. ಯಾರೋ ಒಬ್ಬರು ಇಬ್ಬರು ಹೇಳಿಕೆ ಕೊಟ್ಟಿರಬಹುದು. ವಿನಾಕಾರಣ ರಾಜಕಾರಣ ಮಾಡಬಾರದು ಎಂದರು.
ಮುಖ್ಯಮಂತ್ರಿಗಳು ಡಿಸಿ, ಸಿ.ಇ.ಓ.ಗಳ ಸಭೆಯಲ್ಲಿ ದ್ವೇಷ ಭಾಷಣ ಪ್ರಚೋದನೆ ಮಾಡುವುದನ್ನು ದಮನ ಮಾಡಬೇಕು ಎಂದು ಹೇಳಿದ್ದಾರೆ. ಮುಂದಿನ ದಿನ ಶಾಂತಿಯ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲರು ಸೇರಿ ಭಾಗವಹಿಸಬೇಕು ಭ್ರಾತೃತ್ವ ವಾತಾವರಣ ನಿರ್ಮಾಣ ಆಗಬೇಕು.
95% ಜನರಿಗೆ ಇದು ಬೇಕಾಗಿಲ್ಲ ಕೆಲವೇ ಕೆಲವು ಜನ ಹಾಗೂ ಸಂಘಟನೆಗಳು ಇದಕ್ಕೆ ಪ್ರಚೋದನೆ ಮಾಡುತ್ತಿವೆ. ಜನ ಸುವ್ಯವಸ್ಥೆ ಶಾಂತಿ ಬಯಸುತ್ತಿದ್ದಾರೆ. ಸುಮ್ಮನಿದ್ದರೆ ಇಂತಹ ಧ್ವನಿಗಳು ಹೆಚ್ಚಾಗುತ್ತವೆ. ಎರಡೂ ಕಡೆ ಸಂಘಟನೆ ಹಾಗೂ ಪ್ರಚೋದನೆ ಮಾಡುತ್ತಿದ್ದಾರೆ. ನಾನು ಹಿಂದೂ ಮುಸ್ಲಿಂ ಅನ್ನಲ್ಲ ಎರಡೂ ಕಡೆ ಇದೆ. ಅದರ ವಿರುದ್ಧ ವಿಶೇಷ ಕ್ರಮ ಆಗಬೇಕು. ಸದ್ಯದಲ್ಲೇ ಆಂಟಿ ಕಮ್ಯೂನಲ್ ಫೋರ್ಸ್ ಕಾರ್ಯೋನ್ಮುಖ ಆಗುತ್ತದೆ ಎಂದು ತಿಳಿಸಿದರು.