
ಕೊಬ್ಬರಿಗೆ ತುಸು ಬೆಲೆ ಏರಿಕೆ ಖುಷಿ ನಡುವೆ ಬಿಸಿಲಿನ ತಾಪ ತೆಂಗು ಬೆಳೆಗಾರರು ಭವಿಷ್ಯ ಚಿಂತೆಯಲ್ಲಿ ಆಕಾಶ ನೋಡುವಂತಾಗಿದೆ. ಬಿಸಿಲಿನ ಝಳದಿಂದ ರಕ್ಷಿಸಿದರೆ, ಈಗಲೇ ಎಚ್ಚೆತ್ತುಕೊಂಡು ಕ್ರಮವಹಿಸಿದರೆ ಮಾತ್ರ ಮುಂದಿನ ವರ್ಷ ನಿರೀಕ್ಷಿತ ಇಳುವರಿ. ಇಲ್ಲದಿದ್ದರೆ ದೊಡ್ಡ ಪ್ರಮಾಣದ ಕುಂಠಿತ ಕಟ್ಟಿಟ್ಟ ಬುತ್ತಿಯೇ ಸರಿ. ರಾಜ್ಯದಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆ. “ಕಲ್ಪತರು ನಾಡು”ಎಂದೆ
ಹೆಸರುವಸಿಯದ ತುಮಕೂರು ಒಂದರಲ್ಲೇ 2,24,507 ಹೆಕ್ಟೇರ್ ಸೇರಿದಂತೆ ಇಡೀ ರಾಜ್ಯದಲ್ಲಿ 7,05,111 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಯಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ರೋಗದಿಂದ ಬಳಲಿದ್ದ ತೆಂಗಿಗೆ ಈ ವರ್ಷ ಇನ್ನಿಲ್ಲದಂತೆ ಬಿರು ಬಿಸಿಲು ಕಾಡುತ್ತಿದೆ. ಕೊಬ್ಬರಿ ಬೆಲೆ ಏರಿಕೆ ಖುಷಿ ನಡುವೆ ಬಿರು ಬಿಸಿಲಿನ ತಾಪ ತೆಂಗು ಬೆಳೆಗಾರರು ಭವಿಷ್ಯದ ಚಿಂತೆಯಲ್ಲಿ ಆಕಾಶ ನೋಡುವಂತಾಗಿದೆ. ಬಿಸಿಲಿನ ಝಳದಿಂದ ರಕ್ಷಿಸಿದರೆ, ಈಗಲೇ ಎಚ್ಚೆತ್ತುಕೊಂಡು ಕ್ರಮವಹಿಸಿದರೆ ಮಾತ್ರ ಮುಂದಿನ ವರ್ಷ ನಿರೀಕ್ಷಿತ ಇಳುವರಿ. ಇಲ್ಲದಿದ್ದರೆ ದೊಡ್ಡ ಪ್ರಮಾಣದ ಕುಂಠಿತ ಕಟ್ಟಿಟ್ಟ ಬುತ್ತಿಯೇ ಸರಿ. ಬಿಸಿಲಿನಲ್ಲಿ ತೆಂಗಿಗೆ ಕಪ್ಪುತಲೆ ಹುಳು, ಬಿಳಿನೊಣ ಮತ್ತಿತರ ಕೀಟಬಾಧೆ ಹೆಚ್ಚಾಗಿರುವುದರಿಂದ ಹತೋಟಿ ಅಗತ್ಯ.
ತೆಂಗು ಬೆಳೆಗಾರರು ತೋಟದಲ್ಲಿ ತೇವಾಂಶ, ಕಳೆ ಮತ್ತು ಫಲವತ್ತತೆ ನಿರ್ವಹಣೆಗೆ ಹೆಚ್ಚಿನ ಗಮನಕೊಡಬೇಕು. ಬಿಸಿಲಿನಲ್ಲಿ ನೀರು ಹೆಚ್ಚಾಗಿ ಆವಿಯಾಗುತ್ತದೆ. ಆದ್ದರಿಂದ ತೆಂಗಿನ ತೋಟದಲ್ಲಿ ನೀರಿನ ತೇವಾಂಶ ಕಡಿಮೆಯಾಗದಂತೆ ತಡೆಯಬೇಕು. ಅದಕ್ಕಾಗಿ ಹೊದಿಕೆ ಅತ್ಯಂತ ಪರಿಣಾಮಕಾರಿ ಕ್ರಮ. ಜತೆಗೆ ಮುಖ್ಯ ವಾಗಿ ಕಡ್ಡಾಯ ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಳ್ಳಬೇಕು. ಮಳೆ ನೀರು ಹರಿದು ಹೋಗದಂತೆ ತಡೆದು, ತೋಟದಲ್ಲಿ ಇಂಗುವಂತೆ ಮಾಡಲು ಉದಿಬದುಗಳನ್ನು ನಿರ್ಮಿಸಬೇಕು. ಅಲ್ಲದೆ ಹಸಿರೆಲೆ ಗೊಬ್ಬರದ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಮಣ್ಣಿನ ತೇವಾಂಶ ನಿರ್ವಹಣೆ ಮತ್ತು ಫಲವತ್ತತೆ ಹೆಚ್ಚುತ್ತದೆ ಹಾಗೂ ಲಭ್ಯವಿರುವ ಮೇವಿನ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಕಳೆ ನಿರ್ವಹಣೆ ಜತೆಗೆ ಜಾನುವಾರುಗಳಿಗೆ ಮೇವು ಒದಗಿ ಹೈನುಗಾರಿಕೆಗೂ ಸಾಥ್ ಸಿಗುತ್ತದೆ. ಕೃಷಿ ತ್ಯಾಜ್ಯಗಳಾದ ತೆಂಗಿನ ಗರಿ, ಸೀಬೆ, ಮಟ್ಟೆ ಇತ್ಯಾದಿಗಳನ್ನು ಸಣ್ಣ ಸಣ್ಣ ತುಣುಕುಗಳಾಗಿ ಕತ್ತರಿಸಿ ತೆಂಗಿನ ಮರದ ಸುತ್ತ ಸುಮಾರು 2 ಮೀ. ವೃತ್ತಾಕಾರದಲ್ಲಿ ಹರಡುವುದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಿನ ಕಾಲ ಉಳಿಯುವಂತೆ ಮಾಡಬಹುದು.

J3tvkannada
ತೆಂಗು ಇಳುವರಿ( Yield) ಹೆಚ್ಚಳಕ್ಕೆ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ‘ನಸುಗುನ್ನಿ’ ಬೆಳೆಯ ನೆರವು ಪಡೆಯಬಹುದೆಂದು ತಿಳಿಸಿದೆ. ತೆಂಗು ತೋಟದಲ್ಲಿ ನಸುಗುನ್ನಿ ಬೆಳೆ ಬೆಳೆಯುವುದರಿಂದ ಇಳುವರಿ ಹೆಚ್ಚಳ ಮಾಡಬಹುದು ಎಂಬ ವೈಜ್ಞಾನಿಕ ಚಿಂತನೆಯನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲಾಗಿದೆ. ನಸುಗುನ್ನಿ ಬೆಳೆ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ದ್ವಿದಳ ಧಾನ್ಯದ ಈ ಸಸ್ಯ ವನ್ನು ಪಾರ್ಕಿನ್ಸನ್ ಕಾಯಿಲೆ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಶತಮಾನದಿಂದ ಬಳಸಲಾಗುತ್ತಿದೆ. ಇದನ್ನು ಇತರೆ ಬೆಳೆಗಳೊಂದಿಗೆ ಹೊದಿಕೆ ಬೆಳೆಯಾಗಿ ಉಪಯೋಗಿಸಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ನಸುಗುನ್ನಿಯನ್ನು ಹಸಿರುಗೊಬ್ಬರ ಹೊದಿಕೆ ಬೆಳೆಯಾಗಿ ಮತ್ತು ಮಣ್ಣಿನ ಹೊದಿಕೆಯ ಮೂಲವಾಗಿ ಬಳಸಬಹುದು. ಈ ಬೆಳೆ ಮಳೆ ಹನಿಗಳ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡಿ, ಮಣ್ಣಿನ ಸವೆತ ಕಡಿಮೆ ಮಾಡುತ್ತದೆ. ಸಾರಜನಕವನ್ನು ಸಮತೋಲಗೊಳಿಸಿ ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು. ನಸುಗುನ್ನಿ ಬೆಳೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣ ಲಕ್ಷಣಗಳ ಸುಧಾರಣೆ ಮೂಲಕ ಕನಿಷ್ಠ ಶೇ. 30-40ರಷ್ಟು ಇಳುವರಿಯನ್ನು ಹೆಚ್ಚಿಸಲಿದೆ ಹಾಗೂ ಇದು ಶೇ.98ರಷ್ಟು ಕಳೆ ನಿಯಂತ್ರಿಸಬಲ್ಲದು ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.