
ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಕುಂಬಾರ ಓಣಿಯಲ್ಲಿ ವಿಶೇಷವಾಗಿ ಹೋಳಿ ಆಚರಣೆ ಮಾಡಲಾಗಿದೆ. ಬಣ್ಣದ ಆಟವಿಲ್ಲದೆ, ಹುಣ್ಣಿಮೆಯಂದು ಕಾಮದಹನ ಮಾತ್ರ ನಡೆಯುತ್ತದೆ. ಮರುದಿನ, ಕಾಮನ ಶವದ ಬದಲು ಋತುಮತಿಯಾಗದ ಬಾಲಕಿಯನ್ನು ಅಲಂಕರಿಸಿ ಮೆರವಣಿಗೆ ಮಾಡುವುದು ವಿಶೇಷ. ಕಳೆದ ಐವತ್ತು ವರ್ಷಗಳಿಂದ ಈ ಆಚರಣೆ ನಡೆಯುತ್ತಿದೆ. ಕುಂಭಮೇಳದಿಂದಾಗಿ ಎಲ್ಲೆಡೆ ನಾಗಾಸಾಧುಗಳ ಬಗ್ಗೆ ಗೊತ್ತಾಗಿದೆ.

ಬಟ್ಟೆಯಿಲ್ಲದೆ, ಬದುಕುವ ತಪಸ್ವಿಗಳನ್ನು ನಾಗರೆಂದು ಕರೆಯುತ್ತಾರೆ. ಅವರನ್ನು ʼದಿಗಂಬರʼ ಎಂದೂ ಕರೆಯುತ್ತಾರೆ. ಅಂದರೆ, ಸನಾತನ ಧರ್ಮದಲ್ಲಿ, ನಾಗಾ ಸಾಧುಗಳು ತಮ್ಮ ಜೀವನದಲ್ಲಿ ದೇವರ ಭಕ್ತಿಯಲ್ಲಿ ಮಗ್ನರಾಗಿರುವವರು ಮತ್ತು ಎಂದಿಗೂ ಬಟ್ಟೆಯನ್ನು ಧರಿಸುವುದಿಲ್ಲ ಎಂದು ಕರೆಯಲ್ಪಡುತ್ತಾರೆ. ಹಾಗಾಗಿ ಈ ವರ್ಷ ವಿಭಿನ್ನ ಹಾಗೂ ವಿಷೇಶವಾಗಿ, ನಾಗಾಸಾಧುಗಳ ವೇಷಧಾರಿ ಮಕ್ಕಳು ಈ ಮೆರವಣಿಗೆಯಲ್ಲಿ ಭಾಗವಹಿಸಿ ಎಲ್ಲರ ಗಮನಸೆಳೆದರು.