

ಮೈಸೂರು: ನೀವು ಎಷ್ಟೇ ಲಕ್ಷ ಅಥವಾ ಕೋಟಿ ರೂಪಾಯಿಗಳ ವಾಹನದಲ್ಲಿ ಸಫಾರಿಗೆ ಅಂತ ಕಾಡಿಗೆ ಹೋದರೂ ಕಾಡಿನ ರಾಜ ಮಾತ್ರ ಹುಲಿ ಅಂತ ನೋಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೈಸೂರ ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗೆಂದು ಹೋದ ಪ್ರವಾಸಿಗರಿಗೆ ಹುಲಿರಾಯ ಎದುರಾಗಿದ್ದಾನೆ. ರಸ್ತೆಯ ಒಂದು ಬದಿಯಲ್ಲಿ ಹುಲಿ ತನ್ನ ಸಹಜ ಗತ್ತಿನಲ್ಲಿ ಗಂಭೀರವಾಗಿ ನಡೆದು ಬರುತ್ತಿರುವುದನ್ನು ನೋಡುತ್ತಿದ್ದರೆ ವನ್ಯಜೀವಿ ಬಗ್ಗೆ ಅಕ್ಕರೆ ಹುಟ್ಟುತ್ತದೆ. ಅದು ತನ್ನ ಹಿಂದೆ ಬರುತ್ತಿರುವ ವಾಹನಗಳಿಗೆ ಸೈಡ್ ನೀಡುತ್ತಿಲ್ಲ. ನನ್ನ ಹಾದಿ ನನ್ನದು, ನನ್ನ ನಡಿಗೆ ನನ್ನದು, ಈ ಕಾಡು ಕೂಡ ನನ್ನದು ಅನ್ನುವಂತಿದೆ ಹುಲಿಯ ಗತ್ತು.