

j3tvkannada
ಕಲಬುರಗಿ: ನಗರದಲ್ಲಿ ಪತ್ರಕರ್ತರ ಮುಂದೆ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಇರುಸು ಮುರಿಸಿನ ಪ್ರಸಂಗ ಎದುರಾಯಿತು. ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ನಿಮ್ನ ಕೊಡುಗೆ ಏನು ಅಂತ ನೇರವಾಗಿ ಕೇಳಿದಾಗ ತಬ್ಬಿಬ್ಬಾದ ಸಂಸದ ಜಗದೀಶ್ ಶೆಟ್ಟರ್ ಏನು ಉತ್ತರಿಸಬೇಕೆಂದು ಗೊತ್ತಾಗದೆ ಸುಮ್ಮನೆ ನಕ್ಕುಬಿಟ್ಟರು. ಕೊಂಚ ಸಾವರಿಸಿಕೊಂಡು ಅವರು ವಂದೇ ಭಾರತ್ ಟ್ರೈನು ಕಲಬುರಗಿ ಮೂಲಕವೇ ಹಾದು ಹೋಗುತ್ತದೆ, ಇನ್ನೂ ಏನೆಲ್ಲ ಬೇಡಿಕೆಗಳಿವೆ ಅವೆಲ್ಲವನ್ನು ಮುಂಬರುವ ದಿನಗಳಲ್ಲಿ ಒಂದೊಂದಾಗಿ ಈಡೇರಿಸಲಾಗುವುದು ಎಂದು ಹೇಳಿದರು. ವಂದೇ ಭಾರತ್ ಟ್ರೈನಿಗೆ ನಿಮ್ಮ ಕೊಡುಗೆ ಏನೂ ಇಲ್ಲ, ಅದು ಉಮೇಶ್ ಜಾಧವ್ ಅವರ ಪ್ರಯತ್ನದಿಂದ ಆಗಿದ್ದು ಎಂದು ಪತ್ರಕರ್ತರು ಹೇಳಿದಾಗ ಸಂಸದ ಜಗದೀಶ್ ಶೆಟ್ಟರ್ ಮತ್ತೊಮ್ಮೆ ನಗೆ ಬೀರಿದರು.