
ದಾವಣಗೆರೆ: ಚನ್ನಗಿರಿಯ ಕಾಂಗ್ರೆಸ್ ಶಾಸಕ ಶಿವಗಂಗಾ ವಿ ಬಸವರಾಜು ನೇರನುಡಿಯ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಸಂಪುಟ ವಿಸ್ತರಣೆಯ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ, ಅದು ನಡೆಯಬೇಕು ಮತ್ತು ಹೊಸಬರಿಗೆ ಹಾಗೂ ಯುವಕರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು.

j3tvkannada
ಸಂಪುಟದಲ್ಲಿರುವ 8 ರಿಂದ10 ಸಚಿವರಿಗೆ ಮಂತ್ರಿಯಾಗಿ ಕೆಲಸ ಮಾಡುವುದಕ್ಕಿಂತ ತಮ್ಮ ವ್ಯವಹಾರಗಳನ್ನು ನೋಡಿಕೊಂಡು ಹೋಗುವುದು ಹೆಚ್ಚು ಮುಖ್ಯವಾಗಿದೆ. ಅಂತವರನ್ನು ಸಂಪುಟದಲ್ಲಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ, ನಿಮ್ಮ ವ್ಯಹಾರಗಳ ಮೇಲೆ ಗಮನ ಹರಿಸಿ ಎಂದು ಬಿಡಬೇಕು ಬಸವರಾಜು ಹೇಳಿದರು. ನೀವೂ ಸಚಿವ ಸ್ಥಾನದ ಆಕಾಂಕ್ಷಿಯೇ ಅಂತ ಕೇಳಿದಾಗ ನಾನೇನೂ ಸನ್ಯಾಸಿ ಅಲ್ಲವಲ್ಲ ಎಂದು ಅವರು ಹೇಳಿದರು.