

j3tvkannada
ವಿಜಯಪುರ: ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಮೈಸೂರು ಅವರು ಕೊಡ ಮಾಡುವ ೬ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿನ ದತ್ತಿ ೨೦೨೪ ರ ಪುಸ್ತಕ ಪ್ರಶಸ್ತಿಯು ವಿಜಯಪುರದ ಸಾಹಿತಿ ಶಂಕರ ಬೈಚಬಾಳ ಅವರ ‘ಆಯ್ದ ಕಥೆಗಳು’ ಕಥಾ ಸಂಕಲನಕ್ಕೆ ಲಭಿಸಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಜೂ. ೮ ರಂದು ನಡೆಯುವ ರಾಜ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಚಿಂತಕ ಡಾ. ಅರವಿಂದ ಮಾಲಗತ್ತಿ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ ಅವರುಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ‘ಕೆಂಪು ಹುಡುಗಿ ಕಪ್ಪು ಕಾಲ್ಮರಿ’, ‘ಮಸಬಿನಾಳದ ಪಶುವಾದಿಗಳು’, ‘ವಂದೇ ಮಾತರಂ ಸಲೀಂ’, ‘ಹುಟ್ಟು ಕುರುಡರ ಚಾಳೀಸ್’ ಸೇರಿದಂತೆ ೧೫ ಕಥೆಗಳು ‘ಆಯ್ದ ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಮೈಸೂರಿನ ಕವಿತಾ ಪ್ರಕಾಶನದ ಡಾ. ಗಣೇಶ ಅಮೀನಗಡ ಈ ಕೃತಿ ಪ್ರಕಟಿಸಿದ್ದಾರೆ ಎಂದು ಸಿದ್ಧರಾಮ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.