
ಬೆಂಗಳೂರು: ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಚಾಮರಾಜಪೇಟೆ ಬಿ.ಬಿ.ಎಂ.ಪಿ ಆಟದ ಮೈದಾನ ಹಾಗೂ ಬಿ.ಬಿ. ಜಂಕ್ಷನ್ ಬಳಿಯ ಮಸೀದಿಯಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

j3tvkannada
ಮೈಸೂರು ರಸ್ತೆಯ ಬಿ.ಜಿ.ಎಸ್ ಮೇಲ್ಸೇತುವೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಸವಾರರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ:-
ಮೈಸೂರು ರಸ್ತೆಯ ಟೋಲ್ಗೇಟ್ ಜಂಕ್ಷನ್ನಿಂದ ಬಿ.ಬಿ. ಜಂಕ್ಷನ್ ಮೂಲಕ ಬಿ.ಜಿ.ಎಸ್ ಮೇಲ್ಸೇತುವೆ ಮಾರ್ಗವಾಗಿ ಟೌನ್ಹಾಲ್ವರೆಗೆ ನಿರ್ಬಂಧಿಸಲಾಗಿದೆ. ಮತ್ತು ಟೌನ್ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿ.ಜಿ.ಎಸ್ ಮೇಲ್ಸೇತುವೆಯಲ್ಲಿ ಬಿ.ಬಿ. ಜಂಕ್ಷನ್ ಮಾರ್ಗವಾಗಿ ಟೋಲ್ಗೇಟ್ ಜಂಕ್ಷನ್ವರೆಗೆ ನಿರ್ಬಂಧಿಸಲಾಗಿದೆ.
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:-
ಮೈಸೂರು ಕಡೆಯಿಂದ ಟೌನ್ಹಾಲ್ ಕಡೆಗೆ ಹೋಗುವ ವಾಹನಗಳು ಕಿಮ್ಕೊ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ವಿಜಯನಗರ ಮೂಲಕ ಸಂಚರಿಸಬೇಕು. ಟೌನ್ಹಾಲ್ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಬಿ.ಜಿ.ಎಸ್ ಫ್ಲೈಓವರ್ ಕೆಳಗಿನ ಸರ್ವಿಸ್ ರಸ್ತೆಯಲ್ಲಿ ಸಾಗಬೇಕು. ಭಾರೀ ವಾಹನಗಳು ವೆಟರ್ನರಿ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಗೂಡ್ ಶೆಡ್ ರಸ್ತೆ ಮೂಲಕ ಹೋಗಬೇಕು. ಲಘು ವಾಹನಗಳು ಸಿರ್ಸಿ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಜೆ.ಜೆ. ನಗರ, ಟ್ಯಾಕ್ಬಂಡ್ ರಸ್ತೆ, ಬಿನ್ನಿ ಮಿಲ್ ಜಂಕ್ಷನ್, ಹುಣಸೇಮರ ಮೂಲಕ ಸಾಗಬೇಕು. ಬಸವನಗುಡಿ ಮತ್ತು ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು ಚಾಮರಾಜಪೇಟೆ 1ನೇ ಮುಖ್ಯರಸ್ತೆ, 6ನೇ ಅಡ್ಡ ರಸ್ತೆ ಮೂಲಕ, ಮೈಸೂರು ರಸ್ತೆ, ಸಿರ್ಸಿ ಸರ್ಕಲ್, ಬಿನ್ನಿಮಿಲ್ ರಸ್ತೆ ಮೂಲಕ ಸಂಚರಿಸಬೇಕು.