
ರಾಯಚೂರು:ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ಜೆ.ಜೆ.ಎಂ ಕಾಮಗಾರಿಯಿಂದ ರಸ್ತೆ ಮತ್ತು ಚರಂಡಿ ಹಾಳಾಗಿವೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳು ಪಿ.ಡಿ.ಒಗೆ ಮನವಿ ಪತ್ರ ಸಲ್ಲಿಸಿದರು.

j3tvkannada
ಚಿತ್ತಾಪುರ ಗ್ರಾಮದಲ್ಲಿ ಜೆ.ಜೆ.ಎಂ ಕಾಮಗಾರಿಗಾಗಿ ಸಿ.ಸಿ ರಸ್ತೆ ಅಗೆಯಲಾಗಿದೆ. ಹಾಳಾಗಿರುವ ರಸ್ತೆ ಸರಿಪಡಿಸುವ ಕೆಲಸ ಮಾಡಿಲ್ಲ. ಇದರಿಂದ ತುಂಬ ತೊಂದರೆಯಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಜೆ.ಜೆ.ಎಂ ಕಾಮಗಾರಿ ಅಪೂರ್ಣವಾಗಿದೆ. ಗ್ರಾಮದ ಕೆಲ ಓಣಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿನ ನೀರಿನ ಸಮಸ್ಯೆ ಪರಿಹರಿಸಬೇಕು. ದ್ಯಾಮಮ್ಮದೇವಿ ಮತ್ತು ಬಸವೇಶ್ವರ ಗುಡಿಯ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಳಾಂತರಿಸಿ ಎಂದು ಆಗ್ರಹಿಸಿದರು.
ಸೇನೆಯ ಗ್ರಾಮ ಘಟಕದ ಅಧ್ಯಕ್ಷ ಭೀಮಣ್ಣತೊಗರಿ, ಪ್ರಕಾಶ ಕುರಿ, ಗದ್ದೆಪ್ಪ ಚಿತ್ತಾಪುರ, ಗುರಪ್ಪ, ನಾಗಪ್ಪ, ಗುರಿಕಾರ, ಹನುಮಂತ ಡೊಳ್ಳಿ, ದೂಳಪ್ಪ, ಚಂದ್ರಪ್ಪ, ಮಹೇಶ, ಶಂಕ್ರಪ್ಪ, ಬಸವಲಿಂಗಪ್ಪ, ಪುಟ್ಟೇಶ ನಾಯಕ, ವಿಜಯ ನಾಯಕ ಇನ್ನು ಮುಂತಾದವರು ಇದ್ದರು.