
ದಾವಣಗೆರೆ(ಹೊನ್ನಾಳಿ): ಶುಕ್ರವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ 100 ಮೀಟರ್ ಉದ್ದದ ರಾಷ್ಟ್ರ ದ್ವಜವನ್ನು ಹಿಡಿದು ತಿರಂಗ ಯಾತ್ರೆ ನಡೆಸಿದ ಸಂದರ್ಭದಲ್ಲಿ ಮಾತಾಡಿದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಪಹಲ್ಗಾಮ್ನಲ್ಲಿ ನಡೆದ ನರಮೇದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಶನ್ ಸಿಂಧೂರ ನಡೆಸಿ ಯಶಸ್ವಿಯಾಗಿದೆ ಎಂದು ಹೇಳಿದರು.

j3tvkannada.in
ಉಗ್ರರ ಮೇಲೆ ದಾಳಿ ನಡೆಸಿದ ಭಾರತದ ವಿರುದ್ದ ಪ್ರತಿದಾಳಿಗೆ ಪಾಕಿಸ್ತಾನವು 48 ಗಂಟೆಗಳ ದಾಳಿಯ ತಂತ್ರವನ್ನು ನಡೆಸಿತ್ತು, ಆದರೆ ನಮ್ಮ ಸೈನಿಕರು ಈ ಯೋಜನೆಯನ್ನು 8 ಗಂಟೆಗಳಲ್ಲಿ ಬುಡಮೇಲು ಮಾಡಿದರು ಎಂದು ತಿಳಿಸಿದರು. 48 ಗಂಟೆಗಳ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದ ಪಾಕಿಸ್ತಾನ ಸೇನೆ, ಯೋಜನೆಯನ್ನು ನಮ್ಮ ರಕ್ಷಣಾ ಪಡೆಗಳು ತಲೆಕೆಳಗು ಮಾಡಿದವು.
ವಾಯುನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಭಾರತದ ಎದುರು ಪಾಕ್ ಮಂಡಿಯೂರುವಂತೆ ಮಾಡಿದವು, ಎಂದು ಹೇಳಿದರು. ಉಗ್ರರ ನೆಲೆ, ಮೂಲ ಸೌಕರ್ಯಗಳನ್ನು ನಾಶಗೊಳಿಸುವ ಉದ್ದೇಶದಿಂದ ನಮ್ಮ ಪಡೆಗಳು ದಾಳಿ ನಡೆಸಿದ್ದವು. ಆದರೆ ಪಾಕಿಸ್ತಾನ ಡ್ರೋಣ್ ಕ್ಷಿಪಣಿ ಬಳಸಿಕೊಂಡು ನಮ್ಮ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿತು. ನಮ್ಮನ್ನು ಕೆಣಕಿದ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ಕೊಡಲಾಯಿತು. ಆಪರೇಶನ್ ಸಿಂಧೂರದ ಸಮಯದಲ್ಲಿ ನೌಕಾಪಡೆ ಕೂಡಾ ಭಾಗಿ ಆಗಿದ್ದರೆ, ಪಾಕಿಸ್ತಾನವು 1971 ಕ್ಕಿಂತಲೂ ಕೆಟ್ಟ ಫಲಿತಾಂಶವನ್ನು ಎದುರಿಸುತ್ತಿತ್ತು ಎಂದು ಹೇಳಿದರು.