
ಯಾದಗಿರಿ: ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದು ತಮ್ಮ ಕಛೇರಿಯಲ್ಲಿ ಯಾರಾದರು ತಂಬಾಕು ಸೇವನೆ ಮಾಡುತ್ತಿದ್ದರೆ ಅವರ ಎನ್.ಆರ್.ಟಿ. ಚಿಕಿತ್ಸೆ ಮೂಲಕ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಧರಣೇಶ ಎಸ್.ಪಿ ಅವರು ಹೇಳಿದರು. ಯಾದಗಿರಿ ನಗರದಲ್ಲಿ ಇತ್ತೀಚಿನ ನಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ತಪಾಸಣೆ ಶಿಬಿರ, ತಂಬಾಕು ಕುರಿತು ಅರಿವು ಮೂಡಿಸು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

j3tvkannada
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದು ತಮ್ಮ ಕಛೇರಿಯಲ್ಲಿ ಯಾರಾದರು ತಂಬಾಕು ಸೇವನೆ ಮಾಡುತ್ತಿದ್ದರೆ ಅವರ ಎನ್.ಆರ್.ಟಿ. ಚಿಕಿತ್ಸೆ ಮೂಲಕ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲು ತಮ್ಮ ಕಛೇರಿಯನ್ನು ಮುಂದಿನ ದಿನಗಳಲ್ಲಿ ತಂಬಾಕು ಮುಕ್ತ ಕಛೇರಿಯೆಂದು ಘೋಷಿಸಲಾಗುವುದು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಸೌಮ್ಯ ಭಾವಿ ಅವರು ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಗ್ಯಾಂಗ್ರೀನ್, ಬಿಪಿ, ಸುಗರ್, ಟಿ.ಬಿ. ತಲೆ ಕೂದಲು ಉದುರುವಿಕೆ, ಅವಧಿ ಪೂರ್ವ ಮಗುವಿನ ಜನನ ಮುಂತಾದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಸಲಹೆಗಾರರಾದ ಶ್ರೀಮತಿ ಮಹಾಲಕ್ಷಿ? ಸಜ್ಜನ್ ಅವರು ಮಾತನಾಡಿ, ಧ್ಯೇಯ ವಾಕ್ಯ ಆಕರ್ಷಕ ಉತ್ಪನ್ನಗಳು, ಕರಾಳ ಉದ್ದೇಶಗಳು, ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಆಕರ್ಷಣೆಯನ್ನು ಬಹಿರಂಗ ಪಡಿಸುವುದರ ಕುರಿತು ತಿಳಿಸಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದಡಿಯಲ್ಲಿ ಇರುವ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದು ಕೊಳ್ಳಬೇಕೆಂದು ಮತ್ತು ನಿಕೋಟಿನ್ ಮಾತ್ರೆಗಳನ್ನು ಉಚಿತವಾಗಿ ಸಿಗುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಡಿ.ಎಸ್.ಪಿ. ಭರತ ತಲ್ವಾರ್, ಡಾ.ಸೌಮ್ಯ ಭಾವಿ, ಡಾ.ನಾಗರಾಜ ಗೌಳಿ, ಡಾ.ನಿಕಿತ ಗೋವಿಂದ, ಯಾದಗಿರಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಸಮಾಜ ಕಾರ್ಯಕರ್ತರಾದ ಶ್ರೀ ವಿಜಯ ಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.