
ತುಮಕೂರು : ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ದುಸ್ಥಿತಿಯ ನಡುವೆಯೂ, ಗುಬ್ಬಿ ಬಳಿ ಹೊಸ ಟೋಲ್ ಪ್ಲಾಜಾ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ರಸ್ತೆ ಅಭಿವೃದ್ಧಿ ಕಾರ್ಯಗಳು ವಿಳಂಬವಾಗಿದ್ದರೂ, ಟೋಲ್ ವಸೂಲಿ ಮಾಡಲು ಹೊರಟಿರುವ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ರೈತರು ಮತ್ತು ಸ್ಥಳೀಯರು ತೀವ್ರವಾಗಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ದುರಸ್ತಿ ಮಾಡದೆ ಟೋಲ್ ಸಂಗ್ರಹಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ ಐದು ರಾಷ್ಟ್ರೀಯ ಹೆದ್ದಾರಿಗಳೂ ಯದ್ವಾತದ್ವಾ. ಗುಂಡಿ-ಹೊಂಡಗಳು, ಅವೈಜ್ಞಾನಿಕ ತಿರುವುಗಳು, ಕಿರಿದಾದ ರಸ್ತೆಗಳು, ನಾನಾ ಕಡೆಗಳಲ್ಲಿ ಕಾಮಗಾರಿ ವಿಳಂಬದಿಂದ ಪ್ರಯಾಣ ಹೈರಾಣದ ದುಸ್ಥಿತಿಯಿದೆ. ರಸ್ತೆ ಅಭಿವೃದ್ಧಿ ಆಗದಿದ್ದರೂ ಪರವಾಗಿಲ್ಲ, ಟೋಲ್ ವಸೂಲಿ ಮಾತ್ರ ಆಗಬೇಕೆಂಬ ಧೋರಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಗುತ್ತಿಗೆ ಪಡೆದವರದ್ದಾಗಿದೆ. ಇದೀಗ ಗುಬ್ಬಿ ಭಾಗದಲ್ಲಿ ಮತ್ತೊಂದು ಹೊಸ ಟೋಲ್ ಪ್ಲಾಜಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ರೈತರು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಹೌದು ಮಂಡ್ಯದ ಕೌಡ್ಲಿಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ನಿರ್ಮಾಣದ ತೆರೆಮರೆ ಕಸರತ್ತು ನಡೆದಿದ್ದು, ಸ್ಥಳೀಯರು ಆಕ್ಷೇಪ ಎತ್ತಿದ್ದಾರೆ. ಗುಬ್ಬಿಯಿಂದ ಮಂಡ್ಯದ ಕೌಡ್ಲಿಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಕಳೆದ ಐದು ವರ್ಷಗಳ ಹಿಂದೆ ಮೇಲ್ದರ್ಜೆಗೇರಿಸಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದ ಸರಕಾರ ಇದುವರೆಗೂ ರಸ್ತೆ ಕಾಮಗಾರಿ ಸರಿಯಾಗಿ ಮುಗಿಸಿಲ್ಲ. ಹೀಗಿರುವಾಗ ಜಿ.ಹೊಸಹಳ್ಳಿಯಲ್ಲಿ ಟೋಲ್ ಪ್ಲಾಜಾ ತೆರೆಯುತ್ತಿರುವುದು ಸರಿಯಲ್ಲ ಎಂದು ಜನ ವಿರೋಧಿಸುತ್ತಿದ್ದಾರೆ.
ಟೋಲ್ ಪ್ಲಾಜಾ ನಿರ್ಮಾಣ ಖಂಡಿಸಿ ರೈತರು, ಸ್ಥಳೀಯರು ಶುಕ್ರವಾರ ಜಿ.ಹೊಸಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತಸಂಘದ ತಾಲೂಕು ಕಾರ್ಯದರ್ಶಿ ಸಿ.ಜಿ.ಲೋಕೇಶ್, ರಸ್ತೆ ಅಭಿವೃದ್ಧಿಪಡಿಸದೆ ದಿಢೀರ್ ಗುಬ್ಬಿ ಹೊಸಹಳ್ಳಿ ಬಳಿ ಟೋಲ್ ಪ್ಲಾಜಾ ಮಾಡಲು ಹೊರಟಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ. ಪ್ರತಿಭಟನೆ ಟೋಲ್ ಪ್ಲಾಜಾ ನಿರ್ಮಾಣ ಖಂಡಿಸಿ ರೈತರು, ಸ್ಥಳೀಯರು ಶುಕ್ರವಾರ ಜಿ.ಹೊಸಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತಸಂಘದ ತಾಲೂಕು ಕಾರ್ಯದರ್ಶಿ ಸಿ.ಜಿ.ಲೋಕೇಶ್, ರಸ್ತೆ ಅಭಿವೃದ್ಧಿ ಪಡಿಸದೆ ದಿಢೀರ್ ಗುಬ್ಬಿ ಹೊಸಹಳ್ಳಿ ಬಳಿ ಟೋಲ್ ಪ್ಲಾಜಾ ಮಾಡಲು ಹೊರಟಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ರಾಜ್ಯ ಹೆದ್ದಾರಿ 84 ನ್ನು ಮಾಜಿ ಶಾಸಕರಾದ ದಿ.ವೀರಣ್ಣಗೌಡರ ಅವಧಿಯಲ್ಲಿ ಎರಡು ಜಿಲ್ಲೆಗಳ ನಡುವೆ ರಸ್ತೆ ಸಂಪರ್ಕ ಕಲ್ಪಿಸುವ ದೂರದೃಷ್ಟಿ ಇಟ್ಟುಕೊಂಡು ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿದ್ದರು. ಆದರೆ, ಹಲವು ತಾಂತ್ರಿಕ ದೋಷದಿಂದ ಈ ರಸ್ತೆ ಇನ್ನು ಸಂಪೂರ್ಣವಾಗಿಲ್ಲ. ಇಲ್ಲಿ ಹಲವಾರು ತಿರುವುಗಳಿದ್ದು, ತಿರುವುಗಳು ಇರಬಾರದೆಂಬ ಕಾನೂನಿದ್ದರೂ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಸರಿ ಪಡಿಸಿಲ್ಲ.
ಕಲ್ಲೂರು ಕೆರೆಯ ಮೇಲಂತೂ ತಿರುವುಗಳ ರಸ್ತೆಯಿದೆ, ಸುರುಗೇನಹಳ್ಳಿ ಬಳಿ, ಕೆ.ಜಿ.ಟೆಂಪಲ್ ಬಳಿ ಅಪಾಯಕಾರಿ ತಿರುವುಗಳಿವೆ. ಇಲ್ಲಿಅನೇಕ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಹೀಗಿರುವಾಗ ಇವೆಲ್ಲವನ್ನು ಸರಿಪಡಿಸದ ಇಲಾಖೆ ಏಕಾಏಕಿ ಈ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು ಹೊರಟರೆ ಸ್ಥಳೀಯರ ಗತಿಯೇನೆಂದು ಪ್ರಶ್ನಿಸಿ, ಯೋಜನೆ ಕೈಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ ಎಂದಿದ್ದಾರೆ ರವೀಶ್, ಯತೀಶ್ ಕನ್ನಿಗಪ್ಪ ಪಾಪಣ್ಣ ಸತ್ತಿಗಪ್ಪ ಗಂಗರಾಯಣ್ಣ ಸೇರಿದಂತೆ ಹೊಸಹಳ್ಳಿ ಗ್ರಾಮಸ್ಥರಿದ್ದರು.
ಮೂರು ಬಾರಿ ಟೋಲ್ ಮಾಡಲು ಬಂದಿರುವರನ್ನು ನಾವೇ ತಡೆದಿದ್ದೇವೆ. ಇಲ್ಲಿ ಕೆಎಸ್ಆರ್ಟಿಸಿ ಮತ್ತು ಚಿಕ್ಕಪುಟ್ಟ ವಾಹನಗಳ ಓಡಾಡುವುದು ಬಿಟ್ಟರೆ ಇವರಿಗೆ ಹಣ ಸಿಗುವ ಭಾರಿ ವಾಹನಗಳ ಸಂಚಾರವೇನು ಇಲ್ಲಿ ಇದುವರೆಗೂ ಇಲ್ಲ. ಆದ್ದರಿಂದ ಈ ಟೋಲ್ ಅವಶ್ಯಕವಿಲ್ಲ. ಗೋಪಾಲಪುರ ಗೇಟ್ನ ಬಳಿಯಿಂದ ಗುಬ್ಬಿ ಹೊಸಹಳ್ಳಿ ಬಸ್ ನಿಲ್ದಾಣದವರೆಗೆ ರಸ್ತೆ ಇಳಿಜಾರಾಗಿದ್ದು, ಇಲ್ಲಿಈಗಾಗಲೇ ಅನೇಕ ಅಪಘಾತಗಳಾಗಿ ಸಾವು ನೋವು ಸಂಭವಿಸಿರುತ್ತದೆ. ಮುಖ್ಯವಾಗಿ ಇಲ್ಲಿ ಸರಕಾರಿ ಶಾಲೆಯಿದ್ದು, ಮಕ್ಕಳು ರಸ್ತೆ ದಾಟಲು ಬಹಳ ಕಷ್ಟ ವಾಗಿದೆ ಎಂದಿದ್ದಾರೆ ಜಿ.ಹೊಸಹಳ್ಳಿ ಪ್ರಸಾದ್, ರೈತ ಮುಖಂಡ.