
ಬಳ್ಳಾರಿ: ಬಿಸಿಲಿನ ಬೇಗೆಯನ್ನು ಅನುಭವಿಸುತ್ತಿರುವ ಪ್ರಾಣಿ ಪಕ್ಷಿಗಳ ನೆರವಿಗಾಗಿ ನಮ್ಮ ಸಹಜೀವಿಗಳು ಯೋಜನೆ ರೂಪಿಸಿಕೊಂಡು, ಕಾಳು ನೀರಿನ ಬಟ್ಟಲು ಮತ್ತು ತೊಟ್ಟಿಗಳನ್ನು ಆಸಕ್ತ ಸಾರ್ವಜನಿಕರಿಗೆ ಸರ್ಕಾರಿ ಶಾಲೆ ಆವರಣ ಎ.ಆರ್ಪಿಲೈನ್ ಶಾಲೆ ಬಳ್ಳಾರಿಯಲ್ಲಿ ವಿತರಿಸಿದರು.

j3tvkannada
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನಯಕುಮಾರ್ ರವರು ಮಾತಾಡಿ ಬಿಸಿಲಿನ ತಾಪಕ್ಕೆ ಮೂಕ ಜೀವಿಗಳಿಗೆ ತೊಂದರೆಯಾಗುತ್ತಿದ್ದು, ನಮ್ಮ ಸಹಜೀವಿಗಳನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ತಿಳಿಸಿದರು. ಯೋಜನೆಯ ಕಾರ್ಯದರ್ಶಿ ನಾಗರಾಜ್ ರವರು ಮಾತಾಡಿ ಈ ಬಟ್ಟಲು ಮತ್ತು ತೊಟ್ಟಿಗಳ ಉಚಿತ ವಿತರಣೆಯು ಮೇ ತಿಂಗಳು ಪೂರ್ತಿ ನಡೆಯಲಿದ್ದು, ಆಸಕ್ತರು ಸಂಸ್ಥೆಯ ಮೊಬೈಲ್ ಸಂಖ್ಯೆ 9448584400 ನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಗೋಡೆ ಶಿವರಾಜ್, ಮಾರುತಿ, ಮೆಹಬೂಬ್ ಭಾಷ, ಸಂದೀಪ್,ಆನಂದ್ ಯೋಗಿ ಸದಸ್ಯರಾದ ರಘು, ನಾಗರಾಜ್, ಸಾಗರ್, ಹರ್ಷವರ್ಧನ್, ರಾಜು, ಅನಿಲ್, ಬಾಲಸುಬ್ರಮಣ್ಯ, ಕೇದಾರ್ ನಾಥ್, ರುದ್ರೇಶ್ ಇತರರು ಉಪಸ್ಥಿತರಿದ್ದರು.