
ಮಂಗಳೂರು: ಈ ಹಿಂದಿನ ಗಣತಿ ಆ್ಯಪ್ನ್ನು ಶುಕ್ರವಾರದಿಂದ ಅಪ್ಗ್ರೇಡ್ ಮಾಡಲಾಗಿದೆ. ಅಪ್ಗ್ರೇಡ್ ಮಾಡಲಾದ ಆ್ಯಪ್ನಲ್ಲಿ ಸರ್ವರ್ ಸಮಸ್ಯೆ ತಲೆದೋರಿದ್ದು, ಅದು ತೆರೆದುಕೊಳ್ಳದ ಕಾರಣ ನಿಗದಿತ ಸಂಖ್ಯೆಯ ಗಣತಿ ಕಾರ್ಯ ಪೂರೈಸಲು ಸಾಧ್ಯವಾಗಿಲ್ಲ. ಈ ಹೊಸ ಆ್ಯಪ್ ತೆರೆದುಕೊಳ್ಳದ ಕಾರಣ ಸಾಕಷ್ಟು ಸಮಸ್ಯೆ ಉಂಟಾಗಿದೆ ಹಾಗೂ ಗಣತಿ ಕಾರ್ಯವನ್ನು ತ್ವರಿತವಾಗಿ ಮುಗಿಸಲು ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಗಣತಿದಾರರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದ್ದರೂ ಅವರಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲಎಂಬ ಕೂಗು ಕೇಳಿ ಬಂದಿದೆ. ಬಿರು ಬಿಸಿಲಿನ ದಿನಗಳಲ್ಲಿಸರ್ವರ್ ಸಮಸ್ಯೆ ಕಂಡುಬಂದ ಕಾರಣ ಗಣತಿದಾರರು ಬಳಲಿ ಬೆಂಡಾಗಿದ್ದು, ಅಲೆಯುವಂತಾಗಿದೆ.

j3tvkannada
ಈ ಹಿಂದಿನ ಗಣತಿ ಆ್ಯಪ್ನ್ನು ಶುಕ್ರವಾರದಿಂದ ಅಪ್ಗ್ರೇಡ್ ಮಾಡಲಾಗಿದೆ. ಅಪ್ಗ್ರೇಡ್ ಮಾಡಲಾದ ಆ್ಯಪ್ನಲ್ಲಿ ಸರ್ವರ್ ಸಮಸ್ಯೆ ತಲೆದೋರಿದ್ದು, ಅದು ತೆರೆದುಕೊಳ್ಳದ ಕಾರಣ ನಿಗದಿತ ಸಂಖ್ಯೆಯ ಗಣತಿ ಕಾರ್ಯ ಪೂರೈಸಲು ಸಾಧ್ಯವಾಗಿಲ್ಲ. ಈ ಹೊಸ ಆ್ಯಪ್ ತೆರೆದುಕೊಳ್ಳದ ಕಾರಣ ಸಾಕಷ್ಟು ಸಮಸ್ಯೆ ಉಂಟಾಗಿದೆ ಹಾಗೂ ಗಣತಿ ಕಾರ್ಯವನ್ನು ತ್ವರಿತವಾಗಿ ಮುಗಿಸಲು ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಗಣತಿದಾರರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದ್ದರೂ ಅವರಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬಂದಿದೆ. ಬಿರು ಬಿಸಿಲಿನ ದಿನಗಳಲ್ಲಿ ಸರ್ವರ್ ಸಮಸ್ಯೆ ಕಂಡುಬಂದ ಕಾರಣ ಗಣತಿದಾರರು ಬಳಲಿ ಬೆಂಡಾಗಿದ್ದು, ವೃಥಾ ಅಲೆಯುವಂತಾಗಿದೆ
ನೆಟ್ ವರ್ಕ್ ಸಮಸ್ಯೆ:-
ಜಾತಿ ಗಣತಿಗೆ ಅತಿ ಹೆಚ್ಚಿನ ನೆಟ್ವರ್ಕ್ ಸಮಸ್ಯೆಯೂ ಕಂಡುಬರುತ್ತಿದೆ. ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಇಲ್ಲದ ಹೆಚ್ಚಿನ ಸ್ಥಳಗಳಿದ್ದು, ಈ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸಿ ಅಪ್ಲೋಡ್ ಮಾಡುವುದು ಹರಸಾಹಸವಾಗಿದೆ. ನೆಟ್ ವರ್ಕ್ ಇರುವ ಕಡೆಗಳಲ್ಲಿ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿದ ಕೂಡಲೇ ಕುಟುಂಬ ಸದಸ್ಯರ ಮಾಹಿತಿ ಸಿಗುತ್ತದೆ. ಆದರೆ ನೆಟ್ ವರ್ಕ್ ಇಲ್ಲದ ಕಡೆ ಕುಟುಂಬ ಒಂದರ 42 ರೀತಿಯ ಮಾಹಿತಿಗಳನ್ನು ಆಫ್ ಲೈನ್ನಲ್ಲಿ ಸಂಗ್ರಹಿಸಿ ಅದನ್ನು ನೆಟ್ ವರ್ಕ್ ಇರುವ ಸ್ಥಳಗಳಲ್ಲಿ ಅಪ್ಲೋಡ್ ಮಾಡಬೇಕಿದೆ. ಸಾಮಾನ್ಯವಾಗಿ ಒಂದು ಮನೆಯ ಗಣತಿಗೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ನೆಟ್ ವರ್ಕ್ ಇಲ್ಲದ ಪರಿಸರದಲ್ಲಿ ದಿನ ಒಂದಕ್ಕೆ 10 ಮನೆಗಳ ಗಣತಿಯೂ ಸಾಧ್ಯವಾಗುತ್ತಿಲ್ಲ.
ನೆಟ್ವರ್ಕ್ ಸಿಗದ ಪ್ರದೇಶವೊಂದರ ಐದು ಮನೆಗಳ ಮಂದಿಯನ್ನು ಒಟ್ಟಾಗಿ ನೆಟ್ ವರ್ಕ್ ಇರುವ ಪ್ರದೇಶಕ್ಕೆ ಶುಕ್ರವಾರ ಬರಲು ತಿಳಿಸಲಾಗಿತ್ತು. ಈ ವೇಳೆ ಜಾತಿ ಗಣತಿಗಿರುವ ಹೊಸ ಆ್ಯಪ್ ತೆರೆದುಕೊಳ್ಳದ ಕಾರಣ ಅವರೆಲ್ಲ ಸುಮ್ಮನೆ ಹಿಂದಿರುಗಬೇಕಾಯಿತು. ಕೂಲಿ ಕಾರ್ಮಿಕರಾದ ನಮಗೆ ರಜೆ ಹಾಕಿ ತೆರಳಿದ ಕಾರಣ ಸಂಬಳವೂ ಇಲ್ಲದಂತಾಗಿದೆ ಎಂದು ಬೆಳ್ತಂಗಡಿಯ ಸಂಜೀವ ಕೆ. ತಿಳಿಸಿದ್ದಾರೆ.
ಕಳಪೆ ಪೂರ್ವ ತಯಾರಿಯ ಗಣತಿ:-
ಇದೊಂದು ಪೂರ್ವ ತಯಾರಿ ಇಲ್ಲದೆ ತರಾತುರಿಯ ಗಣತಿ ಕಾರ್ಯವಾಗಿದೆ. ತಹಸೀಲ್ದಾರರು ಮತ್ತು ಇ.ಒ ಸಭೆಗೆ ಬಂದಾಗ ಅವರಿಗೆ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇರಲಿಲ್ಲ. ಇದುವರೆಗೆ ಬಹಳಷ್ಟು ಗಣತಿ ಕಾರ್ಯ ನಡೆದಿದೆ. ಆದರೆ ಇಷ್ಟೊಂದು ಕಳಪೆ ಪೂರ್ವ ತಯಾರಿಯ ಗಣತಿ ಇದುವರೆಗೆ ನಡೆದಿಲ್ಲಎಂದು ಹೆಸರು ಹೇಳಲು ಇಚ್ಛಿಸದ ಗಣತಿದಾರ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.